Malenadu Mitra
ರಾಜ್ಯಸಾಗರಸೊರಬಹೊಸನಗರ

ಶಿವಮೊಗ್ಗ ಸಾಹಿತ್ಯ ಪರಿಷತ್ ಚುನಾವಣೆ: ಯಾರಿಗೆ ಎಷ್ಟು ಮತ ಗೊತ್ತಾ ?

ಜಿದ್ದಾಜಿದ್ದಿನ ಚುನಾವಣೆಯಲ್ಲಿ ತಲೆಕೆಳಗಾದ ಶಂಕರಪ್ಪ ಪರಿವಾರದ ಲೆಕ್ಕಾಚಾರ

ಜಿದ್ದಾಜಿದ್ದಿನಿಂದ ಕೂಡಿದ್ದ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡಿ.ಮಂಜುನಾಥ್ ನಾಲ್ಕನೇ ಬಾರಿ ಪರಿಷತ್‍ನ ಸಾರಥಿಯಾಗಿದ್ದಾರೆ.ನಿಕಟಪೂರ್ವ·ಅಧ್ಯಕ್ಷ·ಡಿ.ಬಿ.ಶಂಕರಪ್ಪ·ಅವರ·ಪರವಾಗಿ·ಸಂಘಪರಿವಾರದ·ಕೆಲ ಮುಖಂಡರು ಸಭೆ ನಡೆಸಿ ಬೆಂಬಲ ಕೋರಿದ್ದರು. ಬಿಜೆಪಿಯ ಕೆಲ ಮುಖಂಡರೂ ಕೂಡಾ ಪರೋಕ್ಷವಾಗಿ ಶಂಕರಪ್ಪ ಪರ ಚುನಾವಣೆ ಪ್ರಚಾರ ಮಾಡಿದ್ದರು ಎನ್ನಲಾಗಿತ್ತು. ಸಾಹಿತ್ಯ ಸಂಘಟನೆಯಲ್ಲಿ ರಾಜಕೀಯ ಮತ್ತು ಜಾತಿ ಸಂಘಟನೆಗಳ ಹಸ್ತಕ್ಷೇಪವಿದೆ. ಇದು ಕನ್ನಡ ನಾಡು ,ನುಡಿ ಪ್ರತಿನಿಧಿಸುವ ಸಂಘಟನೆಗೆ ಶೋಬೆ ತರುವ ಸಂಗತಿಯಲ್ಲ ಎಂಬ ವಿರೋಧ ವ್ಯಕ್ತವಾಗಿತ್ತು.
ಈ ಎಲ್ಲ ಆರೋಪ ಪ್ರತ್ಯಾರೋಪಗಳಿಗೆ ಸಾಹಿತ್ಯ ಪರಿಷತ್‍ನ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಅಂತಿಮವಾಗಿ ಡಿ.ಮಂಜುನಾಥ್ ಅವರಿಗೆ ಒಟ್ಟು 2756 ಮತಗಳು ಲಭಿಸಿದರೆ, ಅವರ ಪ್ರತಿಸ್ಪರ್ಧಿ ಡಿ.ಬಿ.ಶಂಕರಪ್ಪ ಅವರಿಗೆ 2314 ಮತಗಳು ಬಂದಿದ್ದು, ಮಂಜುನಾಥ್ ಅವರು 442 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮಾಜಿ ಅಧ್ಯಕ್ಷರುಗಳ ಬಿರುಸಿನ ಪೈಪೋಟಿ ನಡುವೆ ಹೊಸಮುಖಗಳಾದ ಶಿ.ಜುಪಾಶ ಹಾಗೂ ಶ್ರೀನಿವಾಸ್ ಅವರನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಪಾಶ ಅವರು 249 ಮತಗಳನ್ನು ಪಡೆದರೆ, ಶ್ರೀನಿವಾಸ್ ಅವರಿಗೆ ಕೇವಲ 49 ಮತಗಳು ಲಭಿಸಿವೆ.
ಮಂಜುನಾಥ್ ಅವರಿಗೆ ಶಿವಮೊಗ್ಗ,ಸಾಗರ, ಸೊರಬ,ತೀರ್ಥಹಳ್ಳಿ ಹಾಗೂ ಹೊಸನಗರದಲ್ಲಿ ಅಧಿಕ ಮತಗಳು ಬಂದಿದ್ದರೆ, ಶಂಕರಪ್ಪ ಅವರಿಗೆ ಶಿಕಾರಿಪುರ ಮತ್ತು ಭದ್ರಾವತಿಯಲ್ಲಿ ಲೀಡ್ ಬಂದಿದೆ.

ತೀರ್ಥಹಳ್ಳಿ: ಡಿ.ಮಂಜುನಾಥ್-323, ಶಂಕರಪ್ಪ- 66

ಶಿವಮೊಗ್ಗ: ಮಂಜುನಾಥ್ 286, ಶಂಕರಪ್ಪ 256

ಸೊರಬ: ಡಿ. ಮಂಜುನಾಥ್ 179, ಶಂಕರಪ್ಪ 129

ಸಾಗರ: ಡಿ ಮಂಜುನಾಥ್ 391, ಶಂಕರಪ್ಪ 194

ಭದ್ರಾವತಿ: ಡಿ ಮಂಜುನಾಥ್ 252, ಶಂಕರಪ್ಪ 375

ಹೊಸನಗರ: ಮಂಜುನಾಥ್ 464, ಶಂಕರಪ್ಪ 161

ಶಿಕಾರಿಪುರ: ಮಂಜುನಾಥ್ 254, ಶಂಕರಪ್ಪ 946.

Ad Widget

Related posts

ಕೃಷಿ ಅಭಿಯಾನ ಕಾರ್ಯಕ್ರಮದ ಮಾಹಿತಿ ರಥಕ್ಕೆ ಚಾಲನೆ

Malenadu Mirror Desk

ಜನಸಾಮಾನ್ಯರಿಗೆ ನಿವೇಶನಗಳನ್ನು ನೀಡಲು ಲೇಔಟ್ ಸಿದ್ದಪಡಿಸಲು ಸಚಿವ ಬೈರತಿ ಸುರೇಶ್ ಸೂಚನೆ

Malenadu Mirror Desk

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಸಿಎಂ ತಾಕತ್ತು ಪ್ರದರ್ಶಿಸಲಿ: ಮಧು ಬಂಗಾರಪ್ಪ ಸವಾಲು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.