Malenadu Mitra
ಶಿವಮೊಗ್ಗಹೊಸನಗರ

ವಿದ್ಯುತ್ ಗುತ್ತಿಗೆದಾರರಿಗೆ ನಿವೇಶನ ಮಂಜೂರು ಮಾಡಲು ಶಾಸಕರಿಗೆ ಮನವಿ

ಶಿವಮೊಗ್ಗ,ಆ.೪: ಹೊಸನಗರ ತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ನಿವೇಶನ ಮಂಜೂರು ಮಾಡಬೇಕೆಂದು ಸಂಘದ ಪ್ರಮುಖರು ಶಾಸಕ ಹರತಾಳು ಹಾಲಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ನೂರು ವರ್ಷಗಳ ಇತಿಹಾಸ ಇರುವ ರಾಜ್ಯ ಸಂಘದ ಹೊಸನಗರ ತಾಲೂಕು ಘಟಕಕ್ಕೆ ಕಳೆದ ೪೦ ವರ್ಷಗಳಿಂದ ಸಕ್ರಿಯವಾಗಿದೆ. ಸಂಘಕ್ಕೆ ಸಭೆ ಸಮಾರಂಭ ನಡೆಸಲು ಯಾವುದೇ ಜಾಗ ಇರುವುದಿಲ್ಲ ಆದ್ದರಿಂದ ಕಳೂರು ಗ್ರಾಮದಲ್ಲಿ ಗೊತ್ತು ಮಾಡಿರುವ ಒಂದು ಎಕರೆ ಜಾಗವನ್ನು ಸಂಘಕ್ಕೆ ನೀಡಬೇಕು. ಈ ನಿವೇಶನದಲ್ಲಿ ಸಂಘ ನಿರ್ಮಿಸುವ ಮೂಲ ಸೌಕರ್ಯವನ್ನು ಸರಕಾರ ಯಾವುದೇ ತುರ್ತು ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ಸಂಬಂಧಪಟ್ಟವರಿಗೆ ಅರ್ಜಿ ಕಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗಿರೀಶ್ ಕೆ.ಎನ್, ದೇವರಾಜ್, ಸತೀಶ್ ಬಾವಿಕಟ್ಟೆ, ಸುಧೀಂದ್ರ ಪೂಜಾರಿ ಪ್ರಮುಖರಾದ ಎಂ.ಎನ್.ಸುಧಾಕರ್ ಮತ್ತಿತರರು ಹಾಜರಿದ್ದರು.

Ad Widget

Related posts

ವಿಮಾನ ನಿಲ್ದಾಣಕ್ಕೆ ಎಸ್.ಬಂಗಾರಪ್ಪ ಹೆಸರಿಡಲು ಮನವಿ

Malenadu Mirror Desk

ಶರಾವತಿ ಹಿನ್ನೀರಲ್ಲಿ ತೆಪ್ಪ ಮುಳುಗಿ, ಮೂವರು ಯುವಕರು ನಾಪತ್ತೆ

Malenadu Mirror Desk

ಕರ್ಕಿ ಗುರುರಾಜ್ ಸೈಬರ್ ಕಾಪ್ ಆಫ್ ಇಂಡಿಯಾ, ಹರಿಯಾಣದ ಗುರುಗ್ರಾಮದಲ್ಲಿ ಪ್ರಶಸ್ತಿ ಪ್ರದಾನ, ಸೂಪರ್ ಇನ್ವೆಸ್ಟಿಗೇಷನ್ ಗೆ ಸಂದ ಪುರಸ್ಕಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.