Malenadu Mitra
ತೀರ್ಥಹಳ್ಳಿರಾಜ್ಯ

ಅಪಘಾತ : ಕಟ್ಟೆಹಕ್ಲು ಹೆಡ್ ಮಾಸ್ಟರ್ ವೆಂಕಟೇಶ್ ಸಾವು

ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆ ಹಕ್ಲು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಲ್ಲಿನ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವೆಂಕಟೇಶ್ ಸಾವಿಗೀಡಾಗಿದ್ದಾರೆ.

ವೆಂಕಟೇಶ್ ಬೈಕ್​ನಲ್ಲಿ ಬರುತ್ತಿದ್ದಾಗ, ಟರ್ನಿಂಗ್​ನಲ್ಲಿ ಒಮಿನಿಗೆ ಗುದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೆಂಕಟೇಶ್​ರವರು ಸಾವನ್ನಪ್ಪಿದ್ದಾರೆ.

ಶಾಲೆಯ ಕೆಲಸದ ಸಲುವಾಗಿಯೇ ವೆಂಕಟೇಶ್ ಎಲ್ಲಿಗೊ ಹೊರಟ್ಟಿದ್ದರು ಎನ್ನಲಾಗುತ್ತಿದ್ದು, ಟರ್ನಿಂಗ್​ ಸ್ಪೀಡ್ ಆಗಿದ್ದ ಒಮಿನಿಗೆ ಬೈಕ್​ ಡಿಕ್ಕಿಯಾಗಿದೆ.

ಮೂಲತಃ ಕೊಪ್ಪ ತಾಲ್ಲೂಕಿನ ಬೊಮ್ಲಾಪುರದವರಾದ ವೆಂಕಟೇಶ್​ ಈ ವರ್ಷ ಪ್ರಮೋಶನ್​ ಪಡೆದು ಹೆಡ್​ಮಾಸ್ಟರ್ ಆಗಿ ಕಟ್ಲೆ ಹಕ್ಲು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಸುತ್ತಮುತ್ತ ಉತ್ತಮ ಮೇಷ್ಟ್ರು ಎಂದು ಹೆಸರು ಮಾಡಿದ್ದ ಅವರ ನಿಧನಕ್ಕೆ ಸ್ತಳೀಯರು ಕಂಬನಿ ಮಿಡಿದಿದ್ದಾರೆ.

Ad Widget

Related posts

ರೆಮಿಡಿಸ್ವಿಯರ್ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Malenadu Mirror Desk

ಕಾಡು ಹಂದಿ ಹೊಡಿಯಲು ಬಿಡಿ

Malenadu Mirror Desk

ಈಡೂರು ಪರಶುರಾಮಪ್ಪನವರ ಜನ್ಮ ದಿನೋತ್ಸವ ಸ್ಮರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.