Malenadu Mitra
ರಾಜ್ಯಶಿವಮೊಗ್ಗ

ಚುನಾವಣೆ ದಿನ ಸಿಗಂದೂರಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಸರ್ವರೂ ಮತದಾನದಲ್ಲಿ ಭಾಗಿಯಾಗಿ: ಧರ್ಮದರ್ಶಿ ಡಾ.ರಾಮಪ್ಪ

ತುಮರಿ,ಮೇ ೧: ಮತದಾನ ಪ್ರತಿಯೊಬ್ಬರಿಗೂ ಇರುವ ಸಂವಿಧಾನದತ್ತವಾದ ಹಕ್ಕು. ಎಲ್ಲಾ ನಾಗರಿಕ ಬಂಧುಗಳು ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಬೇಕು ಎಂದು ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು ಭಕ್ತವೃಂದಕ್ಕೆ ಸಂದೇಶ ನೀಡಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸಲು ಪ್ರತಿ ಮತದಾರನಿಗೂ ಹಕ್ಕಿದೆ. ಚುನಾವಣೆ ಎಂಬುದು ಗಣತಂತ್ರದ ಹಬ್ಬವಿದ್ದಂತೆ. ಈ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದಂತೆ ಸರ್ವರೂ ಮತದಾನ ಮಾಡಬೇಕು. ಚುನಾವಣೆ ಇರುವ ಕಾರಣ ಮೇ 10 ರಂದು ಸಿಗಂದೂರು ದೇವಾಲಯಲ್ಲಿ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಂದಿನ ಪ್ರವಾಸವನ್ನು ರದ್ದು ಮಾಡಿ ಸರ್ವರೂ ಮತದಾನದಲ್ಲಿ ಭಾಗಿಯಾಗಿ ಸಂವಿಧಾನವನ್ನು ಬಲಗೊಳಿಸಬೇಕೆಂದು ಧರ್ಮದರ್ಶಿಗಳು ಕೋರಿದ್ದಾರೆ.

Ad Widget

Related posts

ಆದ್ಯತಾ ವಲಯದ ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಕೋವಿಡ್ ಲಸಿಕೆ: ಜಿಲ್ಲಾಧಿಕಾರಿ

Malenadu Mirror Desk

ಆಯನೂರು ಆಕ್ರೋಶದ ಹಿಂದೆ ಬೇರೇನೊ ಕಾರಣ ಇದೆಯಾ ?

Malenadu Mirror Desk

ಶಿಕ್ಷಕರ ಗೃಹ ನಿರ್ಮಾಣ ಸಂಘದ ಚುನಾವಣೆ: ಮಹಾಬಲೇಶ್ವರ ಹೆಗಡೆ ತಂಡಕ್ಕೆ ಭರ್ಜರಿ ಜಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.