Malenadu Mitra
ರಾಜ್ಯಶಿವಮೊಗ್ಗ

ದರ್ಶನ್ ಟೀಮ್ ಗೆ ಜಾಮೀನು :ಶ್ಯೂರಿಟಿ ಸಿಗದೇ ಜೈಲಲ್ಲೇ ಉಳಿದ ಜಗದೀಶ್

ಶಿವಮೊಗ್ಗ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಶಿವಮೊಗ್ಗದ ಸೋಗಾನೆ ಸೆಂಟ್ರಲ್ ಜೈಲಿನಲ್ಲಿದ್ದ ಎ-12 ಆರೋಪಿ ಲಕ್ಷಣ್ ಇಂದು ಬಿಡುಗಡೆಯಾಗಿದ್ದಾನೆ.
ಶಿವಮೊಗ್ಗದ ಸೋಗಾನೆ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳಿಗೆ ಕಳೆದ ಶುಕ್ರವಾರ ಹೈಕೋರ್ಟ್ ನಲ್ಲಿ ಜಾಮೀನು ದೊರಕಿತ್ತು. ಎ-6 ಆರೋಪಿ ಜಗದೀಶ್ ಹಾಗೂ ಎ-12 ಆರೋಪಿ ಲಕ್ಷಣ್ ಗೆ ಜಾಮೀನು ಮಂಜೂರಾಗಿತ್ತು.
ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲಿಗೆ ಇಂದು ಆರೋಪಿ ಲಕ್ಷಣ್ ಜಾಮೀನು ಆದೇಶ ಪ್ರತಿ ತಲುಪಿದ ಹಿನ್ನೆಲೆ ಜೈಲಿನಿಂದ ಆತ ಬಿಡುಗಡೆಯಾಗಿದ್ದಾನೆ.

ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷಣ್:

ಶಿವಮೊಗ್ಗ ಜೈಲಿನ ಅಧಿಕಾರಿಗಳು ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆ ಹೊರಬಂದ ಲಕ್ಷಣ್ ಓಡೋಡಿ ಕಾರು ಹತ್ತಿದ್ದಾನೆ. ಲಕ್ಷಣ್ ಕರೆದೊಯ್ಯಲು ಮೊದಲೇ ಬಂದು ಕಾಯುತ್ತಿದ್ದ ಸಹೋದರಿ ಮತ್ತು ಖಳ ನಟ ರಾಜಕುಮಾರ್ ಜೊತೆ ಕಾರಿನಲ್ಲಿ ಬೆಂಗಳೂರಿನತ್ತ ಲಕ್ಷಣ್ ತೆರಳಿದ್ದಾನೆ.

ಜಾಮೀನು ದೊರೆತರೂ, ಜೈಲಿನಲ್ಲೇ ಉಳಿದ ಜಗದೀಶ್:

ಇನ್ನು ಕೊಲೆ ಪ್ರಕರಣದ ಎ-6 ಆರೋಪಿಗೂ ಕೂಡ ಶುಕ್ರವಾರವೇ ಜಾಮೀನು ಮಂಜೂರಾಗಿದೆ. ಆದರೇ, ಶ್ಯೂರಿಟಿ ಸಿಗದ ಹಿನ್ನೆಲೆ ಆರೋಪಿ ಜಗದೀಶ್ ಜೈಲಿನಲ್ಲೇ ಉಳಿಯುವಂತಾಗಿದೆ.

Ad Widget

Related posts

ತುಂಬಿ ಹರಿವ ಚಾನಲ್‌ಗೆ ಕಾರು ಹಾರಿಸಿ ಆತ್ಮಹತ್ಯೆ, ನಾಲ್ವರಲ್ಲಿ ಇಬ್ಬರು ಸಾವು, ಬದುಕುಳಿದ ಇನ್ನಿಬ್ಬರು

Malenadu Mirror Desk

ಟ್ರಾಫಿಕ್ ಜಂಪ್ ಮಾಡಿದರೆ ಬೀಳಲಿದೆ ಗುನ್ನ ! ಟ್ರಾಫಿಕ್ ನಿಗಾ ಇಡಲಿವೆ ಕ್ಯಾಮೆರಾ ಕಳ್ಳಗಣ್ಣು, ಮೊಬೈಲ್‌ಗೆ ಎಸ್‌ಎಂಎಸ್ ಯಾವುದಕ್ಕೆಲ್ಲಾ ಫೈನ್ ಬೀಳಲಿದೆ ಇಲ್ಲಿದೆ ಸಂಪೂರ್ಣ ಮಾಹಿತಿ

Malenadu Mirror Desk

ನಾಪತ್ತೆಯಾಗಿದ್ದ ಗಿರಿರಾಜ್ ಧರ್ಮಸ್ಥಳದಲ್ಲಿ ಪತ್ತೆ, ಮೇಲಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳೂವುದಾಗಿ ನಾಪತ್ತೆಯಾಗಿದ್ದ ಶಿವಮೊಗ್ಗ ಡಿಸಿ ಕಚೇರಿ ನೌಕರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.