Malenadu Mitra
ಶಿವಮೊಗ್ಗ

ಕೈದಿಗಳಿಗೆ ಆರೋಗ್ಯ ತಪಾಸಣೆ


ಶಿವಮೊಗ್ಗರೋಟರಿ ಪೂರ್ವ ಸಂಸ್ಥೆ ಹಾಗೂ ಸಂಗಮ್ ಹೆಲ್ತ್ ಕೇರ್ ಆಸ್ಪತ್ರೆಗಳ ಸಹಯೋಗದಲ್ಲಿ ಭಾನುವಾರ ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಸುಮಾರು ೨೨೦ ಕೈದಿಗಳು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಔಷಧಿ ಮತ್ತು ಸಲಹೆ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಜೈಲಿನ ಮುಖ್ಯ ಅಧೀಕ್ಷಕ ಡಾ.ರಂಗನಾಥ್, ಎಎಸ್ ಶಿವಾನಂದಶಿವಪುರೆ, ಜೈಲರ್ ಗಳಾದ ಅನಿಲ್‌ಕುಮಾರ್ ಎಸ್.ಎಸ್. ಮಹೇಶ್, ರೋಟರಿ ಸಂಸ್ಥೆಯ ವಿಜಯ್‌ಕುಮಾರ್, ವಸಂತ್, ಮಂಜುನಾಥ್ ಕದಂ, ಅರುಣ್ ಧೀಕ್ಷಿತ್ ಭಾಗಹಿಸಿದ್ದರು. ವೈದ್ಯರಾದ ಡಾ.ವರುಣ್, ಡಾ.ಚರಣ್, ಡಾ.ರಶ್ಮಿ, ಡಾ. ಅನುಷಾ ,ಡಾ. ದ್ಯಾಮನಗೌಡ ತಂಡ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ್ದರು.

Ad Widget

Related posts

ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಬೇಡ: ರೈತರ ಮನವಿ

Malenadu Mirror Desk

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಯಡಿಯೂರಪ್ಪ, ಕನಸು ಸಾಕಾರವಾದ ಸಂತೃಪ್ತಿಯಲ್ಲಿ ಜನ ನಾಯಕ

Malenadu Mirror Desk

ಶ್ರೀರಾಮಪುರದಲ್ಲಿ ನವಜಾತ ಗಂಡು ಶಿಶು ಪತ್ತೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.