Malenadu Mitra
ಜಿಲ್ಲೆಶಿವಮೊಗ್ಗ

ಮಳೆ ಅದ್ವಾನ , ಜನರ ಪರದಾಟ

ಮಲೆನಾಡಿನಲ್ಲಿ ಅಕಾಲಿಕವಾಗಿ ಸುರಿದ ಮಳೆ ಭಾರೀ ಅನಾಹುತ ಸೃಷ್ಟಿಸಿದೆ. ಶಿವಮೊಗ್ಗ ಚಿಕ್ಕಮಗಳೂರು ಜಲ್ಲೆಯ ಹಲವು ಭಾಗಗಳಲ್ಲಿ ಬುಧವಾರ ರಾತ್ರಿ ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರದಿಂದಲೂ ಅಲ್ಲಲ್ಲಿ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗೆ ತೊಂದರೆಯುಂಟಾಗಿದೆ.
ಅಡಕೆ ಹಾಗೂ ಭತ್ತದ ಕೊಯ್ಲಿಗೆ ಕೆಲಭಾಗದಲ್ಲಿ ತೊಂದರೆಯಾಗಿದ್ದರೆ, ಶುಂಠಿ ಕಣಗಳಿಗೂ ತೊಂದರೆಯಾಗಿದ್ದು, ಇದರ ಪ್ರಭಾವ ಹಸಿ ಶುಂಠಿ ರೇಟಿನ ಮೇಲೆಯೂ ಬೀರಿದೆ. ಶಿವಮೊಗ್ಗ ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ರಾಜಾಕಾಲುವೆ ಸಮೀಪ ಇರುವ ಹಲವು ಏರಿಯಾಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹೊಸಮನೆ ಬಡಾವಣೆಯಲ್ಲಿ ಕೆಲ ಮನೆಗಳಲ್ಲಿ ರಾತ್ರಿಯಿಡೀ ಮೊಣಕಾಲು ಮಟ್ಟ ನೀರು ನಿಂತಿತ್ತು. ಇದರಿಂದ ವಯೋವೃದ್ಧರು, ಮಕ್ಕಳು ನಿದ್ರೆ ಮಾಡದೆ ಕಾಲ ಕಳೆಯುವಂತಾಯಿತು.

ಕಾರ್ಪೊರೇಟರ್ ರೇಖಾ ರಂಗನಾಥ್

ಕಾರ್ಪೊರೇಟರ್ ಭೇಟಿ
ಹೊಸಮನೆ ಬಡಾವಣೆಯ ಕಾರ್ಪೊರೇಟರ್ ರೇಖಾ ರಂಗನಾಥ್ ಅವರು ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಗರಪಾಲಿಕೆಗೆ ಹಲವು ಬಾರಿ ಮನವಿ ನೀಡಿದ್ದರೂ ರಾಜಾಕಾಲುವೆ ದುರಸ್ತಿಯಾಗಿಲ್ಲ. ಅಲ್ಲಿಂದ ನೀರು ಸರಾಗವಾಗಿ ಹೋಗದ ಕಾರಣ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಬಗ್ಗೆ ಮತ್ತೆ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಕಾಂಗ್ರೆಸ್ ಮುಖಂಡ ಕೆ.ರಂಗನಾಥ್ ಹೇಳಿದ್ದಾರೆ.

Ad Widget

Related posts

ಮುಂದುವರಿದ ಕೊರೊನ ಶತಕದಾಟ:ಶಿವಮೊಗ್ಗ ಭದ್ರಾವತಿಯಲ್ಲಿ ಹೆಚ್ಚು ಪ್ರಕರಣ

Malenadu Mirror Desk

ಕುಡಿದು ಬಂದು ವಿದ್ಯಾರ್ಥಿಗಳನ್ನು ಥಳಿಸುತಿದ್ದ ಪ್ರಾಚಾರ್ಯ ಅಮಾನತು, ವಿದ್ಯಾರ್ಥಿಗಳ ಪ್ರತಿಭಟನೆ : ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ

Malenadu Mirror Desk

ಕೋಮು ಗಲಭೆಯಲ್ಲಿ ಹತ್ಯೆಯಾಗಿದ್ದ ವಿಶ್ವನಾಥ್ ಶೆಟ್ಟಿ ಕುಟುಂಬಕ್ಕೆ ಶ್ರೀಕಾಂತ್ ನೆರವು, ಅಂದು ಪ್ರಚಾರ ಪಡೆದವರು ನಂತರ ಮರತೇ ಬಿಟ್ಟರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.