Malenadu Mitra
ರಾಜ್ಯಶಿವಮೊಗ್ಗ

ಜಿಎಸ್‌ಟಿ ತೊಂದರೆ: ವಾಣಿಜ್ಯೋದ್ಯಮಿಗಳ ಪ್ರತಿಭಟನೆ

ವಾಣಿಜ್ಯೋದ್ಯಮಿಗಳು, ತೆರಿಗೆ ಸಲಹೆಗಾರರು ಹಾಗೂ ತೆರಿಗೆ ಸನ್ನದುದಾರರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿ ಜಿಎಸ್‌ಟಿಯಲ್ಲಿನ ನ್ಯೂನತೆ ಸರಿಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‌ಟಿಯಿಂದ ವಾಣಿಜ್ಯೋದ್ಯಮಿಗಳು ಹಾಗೂ ತೆರಿಗೆ ಸಲಹೆಗಾರರು ಮತ್ತು ಎಲ್ಲ ವರ್ಗದ ತೆರಿಗೆದಾರರಿಗೆ ತೀವ್ರ ತೊಂದರೆಯಾಗಿದೆ. ಕೋವಿಡ್ ಕಾರಣದಿಂದ ಸಂಪೂರ್ಣ ವಹಿವಾಟು ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಜಿಎಸ್‌ಟಿ ಯಲ್ಲಿನ ಕಠಿಣ ಕಾನೂನುಗಳನ್ನು ಸರಕಾರ ಸಡಿಲ ಮಾಡಬೇಕು ಎಂದು ಎಂದು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತೆರಿಗೆ ಸಂಗ್ರಾಹಕರು, ಸನ್ನದುದಾರರು ಹಾಗೂ ವಾಣಿಜ್ಯ ಪ್ರಮುಖರಾದ ಸಂತೋಷ್, ಉದಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Ad Widget

Related posts

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ರಾಜ್ಯ ಸರ್ಕಾರದ ವಿರೋಧ: ಕೇಂದ್ರಕ್ಕೆ ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Malenadu Mirror Desk

ಕಾರವಾರ ಬಿಷಪ್‌ ಆಗಿ ಜೋಗ ಮೂಲದ ಡುಮಿಸ್‌ ಡಾಯಸ್‌ ನೇಮಕ

Malenadu Mirror Desk

ಸಾಗರದ ಹಾಲಿ-ಮಾಜಿ ಶಾಸಕರಿಂದ ಧರ್ಮಸ್ಥಳದಲ್ಲಿ ಆಣೆ -ಪ್ರಮಾಣ ,ಟೀಕೆಗೊಳಗಾದ ಹಾಲಪ್ಪ-ಬೇಳೂರು ನಡೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.