Malenadu Mitra
ರಾಜ್ಯಶಿವಮೊಗ್ಗ

ಗಾಡಿಕೊಪ್ಪದಲ್ಲಿ ಅಪಘಾತ: ಒಬ್ಬ ಸಾವು,ಇನ್ನೊಬ್ಬ ಗಂಭೀರ

ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ಗಂಧರ್ವ ಡೆಲೆಕೆಸಿ ಸಮೀಪ ರಾತ್ರಿ 10.45ಕ್ಕೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮತ್ತೊಬ್ಬ ತೀವ್ರ ಗಾಯಗೊಂಡಿದ್ದಾರೆ. ಎಕ್ಸೆಲ್ ಗಾಡಿಗೆ ಕಾರು ಡಿಕ್ಕಿ ಹೊಡೆದಿದ್ದು, ಒಬ್ಬಾತ ಸ್ಥಳದಲ್ಲಿಯೇ ಸಾವಿಗೀಡಾದರೆ, ಮತ್ತೊಬ್ಬ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸ್ಥಳದಲ್ಲಿ ನಾಗೇಶ್ ಟಿ ಹಾಗೂ ನಾಗಭೂಷಣ್ ಎನ್ನುವವರ ಗಾಡಿ ದಾಖಲೆ ಸಿಕ್ಕಿದ್ದು, ಹುಂಚದಕಟ್ಟೆ ಸಮೀಪದ ಜೋಗಿಸರ ಎಂದು ವಿಳಾಸ ನಮೂದಾಗಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನ ಗುರುತು ಸಿಗದಂತಾಗಿದೆ. ಸಾಗರ ಕಡೆಯಿಂದ ಬಂದ ಕಾರು ಎಕ್ಸೆಲ್ ಗಾಡಿಗೆ ಡಿಕ್ಕಿ ಹೊಡೆಯಿತೆಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಸಿಗಬೇಕಿದೆ. ಗಾಡಿಕೊಪ್ಪ ಭಾಗದಲ್ಲಿ ಇತ್ತಿಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತಿದ್ದ ರಸ್ತೆ ಕಾಮಗಾರಿ ಪೂರ್ಣವಾಗದ ಕಾರಣ ವಾಹನ ಸವಾರರಿಗೆ ತುಂಬಾ ಗೊಂದಲ ನಿರ್ಮಾಣವಾಗುತ್ತದೆ.

Ad Widget

Related posts

ಮಾಜಿ ಆದ್ರೇನ್ …ಬಾಸು … ಮಾಸೇ ಗುರು…

Malenadu Mirror Desk

ಭೂಮಿ ಹಕ್ಕಿಗಾಗಿ ಶರಾವತಿ ಮುಳುಗಡೆ ಸಂತ್ರಸ್ಥರ ಬೃಹತ್ ಪ್ರತಿಭಟನೆ
ಮಾ.29 ರಂದು ಶಿವಮೊಗ್ಗದಲ್ಲಿ ಪಾದಯಾತ್ರೆ, ಅಹೋರಾತ್ರಿ ಧರಣಿ

Malenadu Mirror Desk

ಸಹಕಾರಿ ಸದಸ್ಯತ್ವದ ರದ್ದು ಆದೇಶ ತೆರವು
ಮತ್ತೆ ಮಂಜುನಾಥ್ ಗೌಡರ ಶಖೆ ಆರಂಭ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.