Malenadu Mitra
ರಾಜ್ಯಶಿವಮೊಗ್ಗ

ನಿಶ್ಚಿತಾರ್ಥವಾಗಿದ್ದ ಪ್ರಾಧ್ಯಾಪಕಿ ನೇಣಿಗೆ ಶರಣು

ಶಿವಮೊಗ್ಗದ ಪಿಇಎಸ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ವರದಿಯಾಗಿದೆ.
ಗಾಂಧಿ ಬಜಾರ್‌ನ ತಿಗಳಯ್ಯನ ಕೇರಿಯ ನಿವಾಸಿಯಾಗಿದ್ದ ಜೆ.ಸ್ವಾತಿ (೨೬) ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಪಿಇಎಸ್ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಆಗಿರುವ ಪ್ರಾಧ್ಯಾಪಕಿ ಸ್ವಾತಿ, ೫ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ.
ಇವರಿಗೆ ಕಳೆದ ಒಂದು ತಿಂಗಳ ಹಿಂದಷ್ಟೆ ಮದುವೆ ನಿಶ್ಚಿತಾರ್ಥವಾಗಿತ್ತು. ಈ ಮದುವೆ ವಿಚಾರದಲ್ಲಿ ಶಿಕ್ಷಕಿ ನೇಣಿಗೆ ಶರಣಾಗಿರಬಹುದು ಎಂಬುದು ಸ್ಥಳೀಯರ ಅನುಮಾನವಾಗಿದೆ.
ಬುಧವಾರ ಮಧ್ಯಾಹ್ನ ಪ್ರಾಧ್ಯಾಪಕಿ ನೇಣು ಬಿಗಿದು ಕೊಂಡು ಸಾವನ್ನಪ್ಪಿದ್ದಾಳೆ. ತಕ್ಷಣವೇ ಮೆಗ್ಗಾನ್‌ಗೆ ಸಾಗಿಸ ಲಾದರೂ ಮಾರ್ಗ ಮಧ್ಯದಲ್ಲಿ ಆಕೆ ಅಸುನೀಗಿದ್ದಾರೆ

Ad Widget

Related posts

ಮಧು ಬಂಗಾರಪ್ಪರಿಗೆ ಅದ್ದೂರಿ ಸ್ವಾಗತ, ರಾಜ್ಯಾದ್ಯಂತ ಮಧುರ ಪ್ರಭಾವ ಹೆಚ್ಚಲಿ ಎಂದ ಹೆಚ್.ಎಂ.ರೇವಣ್ಣ

Malenadu Mirror Desk

ಈ ಬಾರಿಯೂ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಇಲ್ಲ

Malenadu Mirror Desk

ಪ್ರತಿಬಾರಿ ಭೂಮಿ ಸಮಸ್ಯೆ ಚುನಾವಣೆ ವಿಷಯವಾಗುವುದಾದರೆ, ಇಷ್ಟು ಇವರು ಮಾಡಿದ್ದೇನು?,
ಪತ್ರಿಕಾ ಸಂವಾದದಲ್ಲಿ ಸಾಗರ ಎಎಪಿ ಅಭ್ಯರ್ಥಿ ದಿವಾಕರ್ ಪ್ರಶ್ನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.