Malenadu Mitra
ರಾಜ್ಯಶಿಕಾರಿಪುರಶಿವಮೊಗ್ಗಸಾಗರಸೊರಬಹೊಸನಗರ

ಶಿವಮೊಗ್ಗದಲ್ಲಿ ಐವರು ಸಾವು ಯಾವ ತಾಲೂಕಲ್ಲಿ ಎಷ್ಟು ಸೋಂಕು ?

ಮಲೆನಾಡಿನಲ್ಲಿ ಕೊರೊನ ಆರ್ಭಟ ಜೋರಾಗಿದ್ದು, ಬುಧವಾರ ಒಂದೇ ದಿನ ಐವರು ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆ 457 ಆಗಿದ್ದು, ಎರಡನೇ ಅಲೆಯಲ್ಲಿ ಇಷ್ಟು ಸಂಖ್ಯೆಯ ಸೋಂಕಿತರು ಪತ್ತೆಯಾಗಿರುವುದು ಇದೇ ಮೊದಲಾಗಿದೆ. ಇದೇ ವೇಳೆ 296 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ ಅತಿಹೆಚ್ಚು ಅಂದರೆ 240 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 39,ಶಿಕಾರಿಪುರದಲ್ಲಿ 56, ತೀರ್ಥಹಳ್ಳಿಯಲ್ಲಿ 30 ,ಸೊರಬ 45 ಸಾಗರದಲ್ಲಿ 14, ಹೊಸನಗರದಲ್ಲಿ 12 ಸೋಂಕು ಪತ್ತೆಯಾಗಿದೆ. ಹೊರಜಿಲ್ಲೆಯಿಂದ ಬಂದ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 17 ಮಂದಿ ವಿದ್ಯಾರ್ಥಿಗಳಲ್ಲೂ ಸೋಂಕು ಕಂಡುಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 2152 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Ad Widget

Related posts

ಭಾರತ್ ಬಂದ್‌ಗೆ ಜಿಲ್ಲಾ ಕಾಂಗ್ರೆಸ್ ಬೆಂಬಲ

Malenadu Mirror Desk

ಕಣ್ಣು,, ಕಿವಿ, ಬಾಯಿ ಇಲ್ಲದ ಸರ್ಕಾರ: ಸಂಸದ ರಾಘವೇಂದ್ರ,ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ

Malenadu Mirror Desk

ಬಿಎಸ್‍ವೈಗೆ ಪೂರ್ಣ ಅಧಿಕಾರ: ವೀರಶೈವ ಸಮಾಜದವರ ಆಗ್ರಹ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.