Malenadu Mitra
ರಾಜ್ಯಶಿವಮೊಗ್ಗ

ಶಿವಮೊಗ್ಗದಲ್ಲಿ ಭಾರೀ ಮಳೆ,ಮನೆಗಳಿಗೆ ನೀರು

ಶಿವಮೊಗ್ಗ ನಗರದಲ್ಲಿ ಗುರುವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಸಂಜೆಯಿಂದ ಆರಂಭವಾದ ಗುಡುಗು ಸಿಡಿಲಿನ ಮಳೆ ಎರಡು ಹಂತದಲ್ಲಿ ಸುರಿಯಿತು.
ಶಿವಮೊಗ್ಗ ನಗರದ ಬಾಪೂಜಿನಗರ, ಗಾಂಧಿನಗರ,ಗೋಪಾಲಗೌಡ ಬಡಾವಣೆ, ವೆಂಕಟೇಶ್ ನಗರದ ಅನೇಕ ತಗ್ಗು ಪ್ರದೇಶಗಳಲ್ಲಿ ಮಳೆಯಿಂದಾಗಿ ಚರಂಡಿ ನೀರು ಸೇರಿ ಮನೆಗಳಿಗೆ ನುಗ್ಗಿದೆ. ಜಯನಗರದ ರಾಜಾಕಾಲುವೆಯಿಂದ ನುಗ್ಗಿದ ನೀರು ಮನೆಗಳಿಗೆ ಕೊಳಚೆಯನ್ನೂ ತಂದು ಹಾಕಿ ಜನರಿಗೆ ತೀವ್ರ ತೊಂದರೆಯಾಯಿತು.


ಸ್ಮಾರ್ಟ್‍ಸಿಟಿ ಕಾಮಗಾರಿ ಪ್ರಗತಿಯಲ್ಲಿರುವ ಕಡೆಗಳಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿರುವ ದೃಶ್ಯ ಕಂಡು ಬಂದಿತು. ಲಾಕ್‍ಡೌನ್ ನಿಮಿತ್ತ ಅನೇಕ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಮಳೆಯಿಂದಾಗಿ ನೀರು ತುಂಬಿದ ರಸ್ತೆಯಲ್ಲಿ ದ್ವಿಚಕ್ರವಾಹನಗಳನ್ನು ಚಲಾಯಿಸಲು ತೊಂದರೆ ಉಂಟಾಗಿತ್ತು. ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಕೊರೊನ ವಾರಿಯರ್ಸ್‍ಗಳಾದ ಆರೋಗ್ಯ ಕಾರ್ಯಕರ್ತರಿಗೆ ತೊಂದರೆಯಾಯಿತು.

Ad Widget

Related posts

ಅಕಾಲಿಕ ಮಳೆ ತಂದ ಆತಂಕ, ಮಲೆನಾಡಿನ ರೈತ ಸಮುದಾಯಕ್ಕೆ ಸಂಕಷ್ಟ

Malenadu Mirror Desk

ಶಿವಮೊಗ್ಗ ನಗರದಲ್ಲಿ ಬಲಗೊಳ್ಳುತ್ತಿರುವ ಜೆಡಿಎಸ್
ಪ್ರೀತಿಯ ರಾಜಕಾರಣದ ಆಯನೂರ್‌ಗೆ ಪ್ರಸನ್ನಕುಮಾರ್ ಬಲ, ಶ್ರೀಕಾಂತ್ ಹೆಚ್ಚು ಸಕ್ರಿಯ

Malenadu Mirror Desk

ಪತ್ರಕರ್ತರಿಗೆ ಬದ್ಧತೆ, ಉದ್ಯಮಕ್ಕೆ ವಿಶ್ವಾಸಾರ್ಹತೆ ಮುಖ್ಯ
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿ ಮಾತನಾಡಿದ ವಾರ್ತಾಇಲಾಖೆ ನಿರ್ದೇಶಕ ಮುರಳೀಧರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.