Malenadu Mitra
ರಾಜ್ಯಶಿವಮೊಗ್ಗ

ತುಂಬಿದ ತುಂಗೆಗೆ ಸಚಿವರಿಂದ ಬಾಗೀನ

ಉತ್ತಮ ಮುಂಗಾರು ಮಳೆಯಿಂದಾಗಿ ತುಂಬಿದ ತುಂಗಾ ಮೇಲ್ದಂಡೆ ಜಲಾಶಯದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ತುಂಗಾನದಿಗೆ ಬಾಗಿನ ಸಮರ್ಪಿಸಿದರು.
ಪತ್ನಿ ಜಯಲಕ್ಷ್ಮಿ ಅವರೊಂದಿಗೆ ಮುಂಜಾಣೆಯೇ ಗಾಜನೂರಿಗೆ ಬಂದು ಪೂರೋಹಿತರು ಆಯೋಜಿಸಿದ್ದ ಗಂಗಾಪೂಜೆಯಲ್ಲಿ ಪಾಲ್ಗೊಂಡಿದ್ದರು. ನಂತರ ಪತ್ನಿ ಸಮೇತರಾಗಿ ನದಿಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ಅವರು, ತುಂಗಾ ಜಲಾಶಯ ತುಂಬಿರುವುದರಿAದ ಭೂಮಿ ಹಸನು ಮಾಡಲು, ನಾಟಿ, ಗೊಬ್ಬರ ಹಾಕಲು ಅನುಕೂಲವಾಗಿದೆ. ದೇವರ ದಯೆಯಿಂದ ಒಳ್ಳೆ ಮಳೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಗನ್ನಿಶಂಕರ್, ಪಾಲಿಕೆ ಸದಸ್ಯರಾಗ ಚನ್ನಬಸಪ್ಪ, ಜ್ಞಾನೇಶ್ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ಭಾಗವಹಿಸಿದ್ದರು.

Ad Widget

Related posts

ಹೋರಾಟದ ಸಾಗರಕ್ಕೆ,ನೂರಾರು ನದಿಗಳು

Malenadu Mirror Desk

ಶಿವಮೊಗ್ಗದಲ್ಲಿ ಡಿವಿಜಿ ಪಾರ್ಕ್ಗೆ ಅಡಿಗಲ್ಲು

Malenadu Mirror Desk

ಭದ್ರಾವತಿ ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಚಿರತೆ ಸೆರೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.