Malenadu Mitra
ರಾಜ್ಯಶಿವಮೊಗ್ಗ

ಹರ್ಷ ಕೊಲೆ: ಮತ್ತಿಬ್ಬರ ಬಂಧನ, ನಾಪತ್ತೆಯಾದ ಹರ್ಷನ ಮೊಬೈಲ್‌ನಲ್ಲಿದೆಯೇ ಕೊಲೆ ರಹಸ್ಯ ?

ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಖಂಡಿಸಿ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇದರ ಬೆನ್ನಲ್ಲೆ ಹತ್ಯೆ ಆರೋಪದ ಮೇಲೆ ಶೀವಮೊಗ್ಗದ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಫರಾಜ್ ಪಾಶಾ
ಜಿಲಾನ್

ಶಿವಮೊಗ್ಗದ ಇಲಿಯಾಸ್ ನಗರದ ಫರಾಜ್ ಪಾಶಾ(24) ಮತ್ತು ವಾದಿ-ಎ-ಹುದಾ ಬಡಾವಣೆಯಲ್ಲಿ ಅಬ್ದುಲ್ ಖಾದರ್ ಜಿಲಾನ್(25) ಬಂಧಿತ ಆರೋಪಿಗಳಾಗಿದ್ದಾರೆ. ಇವಲ್ಲಿ ಜಿಲಾನ್ ವಾಹನ ಚಾಲಕನಾಗಿ ಕಾರ್ಯನಿರ್ವಹಿಸಿದರೆ, ಫರಾಜ್ ಮಾಹಿತಿದಾರನಾಗಿ ಕೆಲಸ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬುಧವಾರ ಈ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ನ್ಯಾಯಾಂಗ ಬಂಧನ:
ಮಂಗಳವಾರ ಬಂಧಿಸಿದ್ದ ಎಲ್ಲಾ ೬ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲರಿಗೂ ನ್ಯಾಯಾಲಯು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ನಡುವೆ ಹರ್ಷನ ಮೊಬೈಲ್ ವಿಡಿಯೊ ಕಾಲ್ ಮಾಡಿದ ಹುಡುಗಿಯರು ಯಾರು ಎಂಬ ಬಗ್ಗೆ ಇಲಾಖೆ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಹರ್ಷನ ಬಳಿಯಿದ್ದ ಮೊಬೈಲ್ ಕೂಡಾ ನಾಪತ್ತೆಯಾಗಿದ್ದು, ಆರೋಪಿಗಳೇ ಅದನ್ನು ಕಿತ್ತುಕೊಂಡಿರಬಹುದಾ ಎಂಬ ಶಂಕೆಯೂ ಪೊಲೀಸರಿಗಿದೆ.

Ad Widget

Related posts

ಸೊರಬದಲ್ಲಿ ಬಗರ್‌ಹುಕುಂ ರೈತರ ಬೃಹತ್ ಹೋರಾಟ ಪ್ರಧಾನಿ ಎದುರು ಮಾತನಾಡಲು ಧೈರ್ಯ ಇಲ್ಲದವರಿಂದ ನ್ಯಾಯ ಮರೀಚಿಕೆ ಎಂದ ಮಧು ಬಂಗಾರಪ್ಪ. ,ಹೋರಾಟ,ಜೈಲು: ಅನ್ಯಾಯ ಬಯಲು ಎಂದು ಗುಡುಗಿದ ಕಾಗೋಡು

Malenadu Mirror Desk

ಅಕೇಶಿಯಾ ಹೋರಾಟ ರೂಪುರೇಷೆ ಚರ್ಚೆ

Malenadu Mirror Desk

ಐಟಿಐಗಳು ಮೇಲ್ದರ್ಜೆಗೆ:ಬಿ.ಎಸ್.ಯಡಿಯೂರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.