Malenadu Mitra
ರಾಜ್ಯಶಿವಮೊಗ್ಗ

ನಿವೃತ್ತ ಅಧಿಕಾರಿಗಳಿಗೆ ಅವಕಾಶ:ಯುವ ವಿದ್ಯಾವಂತರಿಗೆ ಅನ್ಯಾಯ

ಶಿವಮೊಗ್ಗದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿವೃತ್ತ ಅಧಿಕಾರಿಗಳನ್ನ ಮುಂದುವರಿಸಲು ಬೋರ್ಡ್ ತೀರ್ಮಾನ ಮಾಡಿರುವುದು ಖಂಡನೀಯ ಎಂದು ಮಹಾನಗರಪಾಲಿಕೆ ಸದಸ್ಯ ಎಚ್ ಸಿ ಯೊಗೇಶ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಬೋರ್ಡ್ ಯುವ ವಿದ್ಯಾವಂತರಿಗೆ ಅನ್ಯಾಯ ಮಾಡಿದೆ. ಮೂರುಜನ ಅಧಿಕಾರಿಗಳನ್ನು ಮುಂದುವರಿಸಲು ರಾಜಕೀಯ ಒತ್ತಡ ಇರುವ ಅನುಮಾನವಿದೆ. ಬಿಜೆಪಿ ಪಾಲಿಕೆ ಸದಸ್ಯರನ್ನ ಒಳಗೊಂಡ ಬೋರ್ಡ್ ಯುವಕರ ಉದ್ಯೋಗ ಕಸಿದುಕೊಂಡಿದೆ. ಲಕ್ಷಾಂತರ ರೂ.ಮಾಸಿಕ ವೇತನ ಇರುವ ನಿವೃತ್ತರನ್ನು ಉಳಿಸಿಕೊಳ್ಳುವ ಬದಲು ನಿರುದ್ಯೋಗಿಗಳನ್ನು ಕಡಿಮೆ ವೇತನದಲ್ಲಿ ನೇಮಕ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳುವ ಮೋದಿ ಅವರ ಸರಕಾರ ಇಲ್ಲಿ ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿದೆ. ಕೊರೊನ ಕಾರಣದಿಂದ ಬೆಂಗಳೂರಿನಿಂದ ಉದ್ಯೋಗ ಕಳೆದುಕೊಂಡು ಬಂದಿರುವ ಸಾವಿರಾರು ಯುವಕರು ನಗರದಲ್ಲಿದ್ದಾರೆ. ಯಾರನ್ನೂ ಪರಿಗಣಿಸದ ಸ್ಮಾರ್ಟ್ ಸಿಟಿ ಬೋರ್ಡ್ ನಿವೃತ್ತರಾದರೂ ಮೂವರು ಅಧಿಕಾರಿಗಳನ್ನು ಮುಂದುವರಿಸುವುದರ ಹಿಂದೆ ರುವ ಉದ್ದೇಶವನ್ನು ಜಿಲ್ಲಾಮಂತ್ರಿಗಳು ಸಾರ್ವಜನಿಕರಿಗೆ ತಿಳಸಬೇಕು ಎಂದು ಯೋಗೇಶ್ ಆಗ್ರಹಿಸಿದರು.

ಪ್ರಧಾನ‌ಮಂತ್ರಿಗಳು ಯುವಜನರಿಗೆ ಪಕೋಡ ಮಾರಾಟಮಾಡಿ ಎಂದು ಹೇಳತ್ತಾರೆ ಅವರ ಪಕ್ಷದ ಸ್ಥಳೀಯ ಆಡಳಿತಗಾರರು ಯುವಜನರಿಗೆ ಮೋಸ ಮಾಡುತ್ತಿದೆ.ಈ ನಿರ್ಧಾರ ಹಿಂದೆ ಪಡೆಯದಿದ್ದಲ್ಲಿ ನಿರುದ್ಯೋಗಿ ಯುವಕರನ್ನು ಸೇರಿಸಿ ಹೋರಾಟ ಮಾಡಲಾಗುವುದು ಎಂದು ಯೋಗೇಶ್ ಹೇಳಿದರು

Ad Widget

Related posts

ಎಂಜನಿಯರಿಂಗ್ ಕಾಲೇಜಲ್ಲಿ ಆಂಧ್ರ ಸಚಿವರ ಕನ್ನಡ ಕಲರವ
ಹಳೆಯ ವಿದ್ಯಾರ್ಥಿಗಳು ಜಾಗತಿಕ ಸಮ್ಮಿಲನ

Malenadu Mirror Desk

ಅಡಿಕೆ ಮೌಲ್ಯವರ್ಧನೆಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ: ಡಾ.ಸೆಲ್ವಮಣಿ ಆರ್

Malenadu Mirror Desk

ಹಾಲಪ್ಪ- ಬೇಳೂರು ನಡುವೆ ತೀವ್ರ ಹಣಾಹಣಿ,
ಬಂಗಾರಪ್ಪ ಶಿಷ್ಯರ ನಡುವೆ ಕಾಗೋಡು ಭೀಷ್ಮನಿದ್ದಂತೆ, ಇಬ್ಬರೂ ಗೆಲ್ಲುವವರೇ ಆದ್ರೆ ಸೋಲುವವರಾರು ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.