Malenadu Mitra
ರಾಜ್ಯಶಿವಮೊಗ್ಗ

ವಾಹನ ಜಖಂ ಇನ್ನಿಬ್ಬರು ಬಂಧನ: ಆರೋಪಿಗಳಿಗಿದೆ ಕ್ರೈಂ ಹಿನ್ನೆಲೆ

ಶಿವಮೊಗ್ಗದಲ್ಲಿ ಮಧ್ಯ ರಾತ್ರಿ ವಾಹನ ಜಖಂಗೊಳಿಸಿ ವಿಕೃತಿ ಮೆರೆದಿದ್ದ ಇನ್ನಿಬ್ಬರು ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಹಮದ್ ಸಲೀಂ(30) ಸೂಳೆಬೈಲು ಹಾಗೂ ಭರ್ಮಪ್ಪನಗರದ ಅಕ್ರಿಖಾನ್(32) ಬಂಧಿತ ವ್ಯಕ್ತಿಗಳಾಗಿದ್ದಾರೆ. ಈ ಇಬ್ಬರೂ ವ್ಯಕ್ತಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ವಾಹನ ಜಖಂಗೊಳಿಸಿರುವುದರ ಹಿನ್ನೆಲೆ ಏನು ಎಂಬ ಬಗೆ ತನಿಖೆ ಮುಂದುವರಿದಿದೆ. ಗಾಂಧೀಬಜಾರ್ ಸುತ್ತಮುತ್ತ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸ್ಥಳೀಯ ಮುಖಂಡರೊಂದಿಗೆ ಈ ಬಗ್ಗೆ ಸಭೆ ನಡೆಸಿ ಅಪರಾಧಿಗಳ ಅಸಲಿಯತ್ತು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ನಾಲ್ಕು ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ. ಆರೋಪಿಗಳು 14 ಕಾರು, ಒಂದು ಆಟೊ ಹಾಗೂ 5 ಬೈಕ್‍ಗಳನ್ನು ಜಖಂಗೊಳಿಸಿದ್ದರು.

Ad Widget

Related posts

ಹರ್ಷ ಕೊಲೆ ಹಿಂದೆ ಷಡ್ಯಂತ್ರ, ಹರ್ಷನಿಗೆ ವಿಡಿಯೋ ಕಾಲ್ ಮಾಡಿ ಕರೆದಿದ್ದ ಹುಡುಗಿಯರು ಯಾರು?, ಹಲವು ಆಯಾಮಗಳಲ್ಲಿ ಪೊಲೀಸರಿಂದ ತನಿಖೆ

Malenadu Mirror Desk

ಶ್ರೀಗಂಧ ಕಳ್ಳನ ಬಂಧನ

Malenadu Mirror Desk

ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ: ಐವರ ಬಂಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.