Malenadu Mitra
ರಾಜ್ಯಶಿವಮೊಗ್ಗ

ಜಗಳ ಬಿಡಿಸಿದ್ದ ಸ್ನೇಹಿತರಿಬ್ಬರ ಕೊಲೆ, ಸೂಳೆಬೈಲಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ

ಶಿವಮೊಗ್ಗ ನಗರ ಸಮೀಪದ ಸೂಳೆಬೈಲಿನಲ್ಲಿ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ಯುವಕರನ್ನು ಕೊಲೆ ಮಾಡಲಾಗಿದೆ.

ಸೂಳೆಬೈಲಿನ ಸಲೀಂ(22) ಮತ್ತು ಆತನ ಸ್ನೇಹಿತ ಅಬ್ದುಲ್ (23) ಕೊಲೆಯಾದವರಾಗಿದ್ದಾರೆ. ಟಿಪ್ಪು ಎಂಬಾತನ ಮನೆಯಲ್ಲಿ ನಡೆದಿದ್ದ ಗಲಾಟೆಯನ್ನು ಮೃತರು ಬಿಡಿಸಿಬಂದಿದ್ದರು. ನಮ್ಮ ಮನೆವಿಚಾರಕ್ಕೆ ಅವರೇಕೆ ಬರಬೇಕು ಎಂದು ಕೆರಳಿದ ಟಿಪ್ಪು ಮತ್ತವನ ಸಂಗಡಿಗರು ಸಲೀಂ ಮತ್ತು ಅಬ್ದುಲ್ ನ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆನ್ನಲಾಗಿದೆ

ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಲಿಸರು ದಾದಾಪೀರ್ ಮತ್ತು ಅಲ್ಲಾಭಕ್ಷಿ ಎಂಬುವರನ್ನು ದಸ್ತಗಿರಿ ಮಾಡಿದ್ದು ಉಳಿದವರ ಶೋಧಕಾರ್ಯ ಮುಂದುವರಿಸಿದ್ದಾರೆ

Ad Widget

Related posts

ಶಿವಮೊಗ್ಗ ಎಜುಕೇಷನ್ ಹಬ್ ಆಗಿದೆ: ಸಂಸದ ರಾಘವೇಂದ್ರ

Malenadu Mirror Desk

ನಂದಿತ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

Malenadu Mirror Desk

ಸಂವಿಧಾನ, ನ್ಯಾಯಾಲಯಕ್ಕೆ ಎಲ್ಲರೂ ಬದ್ಧರಾಗಿರಬೇಕು: ಕೆ.ಎಸ್.ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.