Malenadu Mitra
ಭಧ್ರಾವತಿಶಿವಮೊಗ್ಗ

ಭದ್ರಾವತಿಯಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ರಘು ಶವ ಪತ್ತೆ.

ಶಿವಮೊಗ್ಗ: ಭದ್ರಾವತಿಯ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಾಯ್ಲರ್‌ ಸ್ಫೋಟಗೊಂಡ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ.
ಭದ್ರಾವತಿಯ ರಘು ಮೃತ ವ್ಯಕ್ತಿ.
ಭದ್ರಾವತಿ ನಗರ ಹೊರವಲಯದ ಚೆನ್ನಗಿರಿ ರಸ್ತೆಯ ಸೀಗೆಬಾಗಿಯ ರೈಸ್ ಮಿಲ್ ನಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಬಾಯ್ಲರ್ ಸ್ಫೋಟಗೊಂಡು, ಘಟನೆಯಲ್ಲಿ 7 ಜನರು ಗಾಯಗೊಂಡು, ರಘು ಎಂಬ ವ್ಯಕ್ತಿ ಕಣ್ಮರೆಯಾಗಿದ್ದರು‌.

ಕಣ್ಮರೆಯಾಗಿದ್ದ ರಘುಗಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಶೋಧ ಕಾರ್ಯ ಆರಂಭಿಸಲಾಗಿತ್ತು.

ಇದೀಗ ಬಾಯ್ಲರ್ ಸ್ಫೋಟಗೊಂಡ ಸ್ಥಳದಲ್ಲೇ ರಘು ಅವರ ಮೃತದೇಹ ಪತ್ತೆಯಾಗಿದೆ.
ಬಾಯ್ಲರ್ ಸ್ಫೋಟದ ತೀವ್ರತೆಗೆ ಮಿಲ್ ಇದ್ದ ಕಟ್ಟಡ ಕುಸಿದಿತ್ತು. ಅಲ್ಲದೇ, ಹಿಂಭಾಗದ ಎರಡು ಅಂತಸ್ತಿನ ಮನೆ ಸಹ ಸಂಪೂರ್ಣವಾಗಿ ಕುಸಿದಿದೆ. ಮಿಲ್ ಒಳಭಾಗದಲ್ಲಿ ಸಂಪೂರ್ಣ ಛಿದ್ರಗೊಂಡಿದ್ದರಿಂದ ರಘು ನಾಪತ್ತೆಯಾಗಿದ್ದರು. ನಿರಂತರ ಶೋಧದ ಬಳಿಕ ರಘು ಶವ ಪತ್ತೆಯಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

Ad Widget

Related posts

ಶಿವಮೊಗ್ಗದಲ್ಲಿ ಸಾವಿರ ಗಡಿದಾಟಿದ ಗುಣಮುಖರ ಸಂಖ್ಯೆ, 15 ಸಾವು, ಸಾಗರದಲ್ಲಿ ಯಥಾಸ್ಥಿತಿ

Malenadu Mirror Desk

ಬಿಎಸ್‌ವೈ -ಈಶ್ವರಪ್ಪ ಬಣಜಗಳಕ್ಕೆ ಅಭ್ಯರ್ಥಿ ಘೋಷಣೆ ವಿಳಂಬ
ಮೂರನೇ ಪಟ್ಟಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಖೈರಾಗದ ಟಿಕೆಟ್

Malenadu Mirror Desk

ಜೋಕಾಲಿಯಲ್ಲಿದ್ದ ಜವರಾಯ, ಆಡುವ ಕಂದನ ಸಾವು ನ್ಯಾಯವೇ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.