Malenadu Mitra
ಜಿಲ್ಲೆಶಿವಮೊಗ್ಗಸೊರಬ

ಏ.7 ಕ್ಕೆ ಹುರಳಿಯಲ್ಲಿ ಶ್ರಮದಾನ: ಭಾಗವಹಿಸಲು ಶಿಕ್ಷಣ ಸಚಿವರಿಂದ ಕರೆ

ಶಿವಮೊಗ್ಗ : ಜಿಲ್ಲೆಯ ಸೊರಬ ತಾಲೂಕಿನ ಹುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಹಾಗು ಅಡುಗೆ ಮನೆ ನಿರ್ಮಾಣದ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಏ.7 ರಂದು ಶ್ರಮದಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಉದ್ಯೋಗ ಖಾತ್ರಿ (MNREGA) ಯೋಜನೆಯಡಿ ಏ.7 ರ ಸೋಮವಾರ ಬೆಳಿಗ್ಗೆ 8ಗಂಟೆಗೆ ಶ್ರಮದಾನ ಆಯೋಜಿಸಿದ್ದು, ಯೋಜನೆ ಮತ್ತ ಸಾಂಖ್ಯಿಕ ಸಚಿವರಾದ ಡಿ. ಸುಧಾಕರ್ ಸೇರಿದಂತೆ ಜಿಲ್ಲೆಯ – ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಲಿದ್ದಾರೆ.


ನರೇಗಾ ಯೋಜನೆಯನ್ನ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಪರಿಣಾಮಕಾರಿಯಾಗಿ ಜಾರಿಗೆ ತಂದು ದುಡಿಯುವ ಕೈಗಳಿಗೆ ಉದ್ಯೋಗದ ಜೊತೆಗೆ ರಾಷ್ಟ್ರೀಯ ಸಾಕ್ಷರತಾ ಆಂದೋಲನಕ್ಕೂ ಸಹ ನಾಂದಿ ಹಾಡಿದ್ದರು. ಇಂತಹ ಅಭೂತಪೂರ್ವ ಶ್ರಮದಾನದ ಕಾರ್ಯಕ್ರಮವನ್ನ ಮತ್ತೊಮ್ಮೆ ಸೊರಬದಲ್ಲಿ ಆಯೋಜಿಸಲಾಗಿದ್ದು, ಎಲ್ಲರೂ ಕೂಡ ತಪ್ಪದೇ( ಗುದ್ದಲಿ ಹಾಗೂ ಬುಟ್ಟಿ ತರುವುದನ್ನು ಮರೆಯಬೇಡಿ) ಭಾಗವಹಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ.

Ad Widget

Related posts

ಹಲವು ಸಂದೇಶ ನೀಡಿದ ಈಡಿಗರ ಹಕ್ಕೊತ್ತಾಯ ಸಮಾವೇಶ, ಸಮುದಾಯದ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ಸಮುದಾಯದ ನಾಯಕರು ಭ್ರಮೆಯಿಂದ ಹೊರಬರಲಿ

Malenadu Mirror Desk

ಜೆ.ಪಿ.ನಾರಾಯಣ ಸ್ವಾಮಿ ಕೊಡುಗೆ ಅನನ್ಯ: ಜಿ.ಡಿ.ನಾಯ್ಕ್

Malenadu Mirror Desk

ದೇವಸ್ಥಾನಕ್ಕೆ ದೇಣಿಗೆ ನೀಡಿದ ಬಿಕ್ಷುಕಿ,ಆಂಜನೇಯನಿಗೆ ಬೆಳ್ಳಿ ಮುಖವಾಡ ಮಾಡಿಸಿ ಎಂದು ಅಜ್ಜಿ ನೀಡಿದ ಹಣ ಎಷ್ಟು ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.