Malenadu Mitra
ಶಿವಮೊಗ್ಗ

ಬೈಕ್‍ಗೆ ಗುದ್ದಿದ ಕಾರಣ ಜಗಳ, ಯುವಕನ ಕೊಲೆ

ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಕೊಲೆಯಾದ ಘಟನೆ ಶಿವಮೊಗ್ಗ ಟ್ಯಾಂಕಮೊಹಲ್ಲಾದಲ್ಲಿ ನಡೆದಿದೆ. ರಾಹಿಲ್ ಎಂಬ ಯುವ ಕೊಲೆಯಾದ ದುರ್ದೈವಿ.
ಕಳೆದ ತಿಂಗಳು ರಾಹಿಲ್ ಬೈಕ್‍ನಲ್ಲಿ ಹೋಗುವಾಗ ಅಸ್ಗರ್ ಮತ್ತು ಆತನ ತಂದೆ ಸೈಕಲ್‍ನಲ್ಲಿ ಬರುತ್ತಿದ್ದರು. ಆ ಸಂದರ್ಭ ರಾಹಿಲ್ ಬೈಕ್‍ಗೆ ಸೈಕಲ್ ಗುದ್ದಿದ್ದರಿಂದ ಕೋಪಗೊಂಡ ರಾಹಿಲ್ ಅಸ್ಗರ್ ತಂದೆಗೆ ಹಲ್ಲೆ ಮಾಡಿದ್ದ ಎನ್ನಲಾಗಿದೆ.
ತಂದೆಯ ಮೇಲೆ ಹಲ್ಲೆ ಮಾಡಿದ್ದ ಕಾರಣಕ್ಕೆ ಆಕ್ರೋಶಗೊಂಡಿದ್ದ ಅಸ್ಗರ್ ಸೋಮವಾರ ರಾಹಿಲ್ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿದ್ದಾನೆ. ತೀವ್ರಗಾಯಗೊಂಡ ರಾಹಿಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾನೆ. ಕೊಟೆ ಪೊಲೀಸರ್ ಆರೋಪಿ ಅಸ್ಗರ್‍ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಎಸ್ಪಿ ಶೇಖರ್, ಡಿವೈಸ್ಪಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.

Ad Widget

Related posts

ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪರಿಗೆ ಅಭಿನಂದನೆಗಳ ಮಹಾಪೂರ

Malenadu Mirror Desk

ಅರಣ್ಯ ಹಕ್ಕು ಕಾಯಿದೆಯಡಿ ನ್ಯಾಯ ಕೊಡದಿದ್ದಲ್ಲಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಮೊರೆ, ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಎಚ್ಚರಿಕೆ

Malenadu Mirror Desk

ಬೈಕ್ ನಿಲ್ಲಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.