Malenadu Mitra
ಶಿವಮೊಗ್ಗ

ಬೈಕ್‍ಗೆ ಗುದ್ದಿದ ಕಾರಣ ಜಗಳ, ಯುವಕನ ಕೊಲೆ

ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಕೊಲೆಯಾದ ಘಟನೆ ಶಿವಮೊಗ್ಗ ಟ್ಯಾಂಕಮೊಹಲ್ಲಾದಲ್ಲಿ ನಡೆದಿದೆ. ರಾಹಿಲ್ ಎಂಬ ಯುವ ಕೊಲೆಯಾದ ದುರ್ದೈವಿ.
ಕಳೆದ ತಿಂಗಳು ರಾಹಿಲ್ ಬೈಕ್‍ನಲ್ಲಿ ಹೋಗುವಾಗ ಅಸ್ಗರ್ ಮತ್ತು ಆತನ ತಂದೆ ಸೈಕಲ್‍ನಲ್ಲಿ ಬರುತ್ತಿದ್ದರು. ಆ ಸಂದರ್ಭ ರಾಹಿಲ್ ಬೈಕ್‍ಗೆ ಸೈಕಲ್ ಗುದ್ದಿದ್ದರಿಂದ ಕೋಪಗೊಂಡ ರಾಹಿಲ್ ಅಸ್ಗರ್ ತಂದೆಗೆ ಹಲ್ಲೆ ಮಾಡಿದ್ದ ಎನ್ನಲಾಗಿದೆ.
ತಂದೆಯ ಮೇಲೆ ಹಲ್ಲೆ ಮಾಡಿದ್ದ ಕಾರಣಕ್ಕೆ ಆಕ್ರೋಶಗೊಂಡಿದ್ದ ಅಸ್ಗರ್ ಸೋಮವಾರ ರಾಹಿಲ್ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿದ್ದಾನೆ. ತೀವ್ರಗಾಯಗೊಂಡ ರಾಹಿಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾನೆ. ಕೊಟೆ ಪೊಲೀಸರ್ ಆರೋಪಿ ಅಸ್ಗರ್‍ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಎಸ್ಪಿ ಶೇಖರ್, ಡಿವೈಸ್ಪಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.

Ad Widget

Related posts

ಈಶ್ವರಪ್ಪ ವಿರುದ್ಧದ ಆಯನೂರು ಹೇಳಿಕೆಯ ಹಿಂದಿನ ಮರ್ಮ ಏನು ?,
ಸೌಹಾರ್ದ ಶಿವಮೊಗ್ಗ ಘೋಷಣೆಯೊಂದಿಗೆ ಕಣಕ್ಕಿಳಿಯಲು ಮಂಜಣ್ಣ ತಾಲೀಮು

Malenadu Mirror Desk

ಹ್ಯಾಟ್ರಿಕ್ ಹಿರೋ ಗೆ ಶಸ್ತ್ರಚಿಕಿತ್ಸೆ: ಶ್ರೀಕಾಂತ್ ಅಭಿಮಾನಿ ಬಳಗದಿಂದ ವಿಶೇಷ ಪೂಜೆ

Malenadu Mirror Desk

ಫೆ. 12: ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ :ಸಂಸದ ರಾಘವೇಂದ್ರ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.