Malenadu Mitra
ರಾಜ್ಯಶಿವಮೊಗ್ಗ

ಚೋರಡಿ ಸೇತುವೆ ಸಮೀಪ ಮತ್ತೊಂದು ಅಪಘಾತ ಜಿಂಕೆ ಸಾವು

ಶಿವಮೊಗ್ಗ ತಾಲೂಕು ಚೋರಡಿ ಸಮೀಪ ಭಾನುವಾರ ಸಂಜೆ ಇನ್ನೋವ ಕಾರಿಗೆ ಅಡ್ಡ ಬಂದ ಜಿಂಕೆ ಸ್ಥಳದಲ್ಲಿಯೇ ಸಾವಿಗೀಡಾಗಿದೆ.

ಶಿವಮೊಗ್ಗ ಕಡೆಯಿಂದ ವೇಗವಾಗಿ ಹೋಗುತಿದ್ದ ಇನ್ನೋವಾ ಕಾರಿಗೆ ಜಿಂಕೆ ಅಡ್ಡ ಬಂದಿದೆ. ಕಾರುಚಾಲಕನ ನಿಯಂತ್ರಣಕ್ಕೆ ಸಿಗದ ಕಾರು ಏಕಾಏಕಿ ಜಿಂಕೆಗೆ ಡಿಕ್ಕಿ ಹೊಡೆದಿದೆ. ಕಾರು ಜಖಂಗೊಂಡಿದ್ದು, ಭಾರೀ ಗಾತ್ರದ ಜಿಂಕೆ ಸಾವುಕಂಡಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮಹಜರು ನಡೆಸಿ ದೂರು ದಾಖಲಿಸಿದ್ದಾರೆ. ಬೇಸಿಗೆ ದಾಹಕ್ಕ ನೀರು ಅರಸಿ ಬರುವ ಕಾಡುಪ್ರಾಣಿಗಳು ಈ ರೀತಿಯ ಅಪಘಾತಕ್ಕೆ ಒಳಗಾಗುತ್ತವೆ. ಕುಮದ್ವತಿ ನದಿಗೆ ಕಟ್ಟಲಾದ ಸೇತುವೆ ಸಮೀಪವೇ ಈ ಘಟನೆ ಸಂಭವಿಸಿದೆ. ಇತ್ತೀಚೆಗಷ್ಟೆ ಇದೇ ಸೇತುವೆ ಮೇಲೆ ಎರಡು ಬಸ್ ಗಳ ಮುಖಾಮುಖಿ ಡಿಕ್ಕಿಯಾಗಿ ಮೂವರು ಜೀವಕಳೆದುಕೊಂಡಿದ್ದರು

Ad Widget

Related posts

ಯತ್ನಾಳ್ ಗಿಣಿ ಶಾಸ್ತ್ರಕ್ಕೆ ಅವರ ಪಕ್ಷದಲ್ಲೇ ಮನ್ನಣೆ ಇಲ್ಲ : ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯ

Malenadu Mirror Desk

ಧರ್ಮಕೇಂದ್ರಿತ ಸಂಗತಿಗಳಿಂದ ದಾರ್ಶನಿಕರ ಚಿಂತನೆ ಗೌಣ

Malenadu Mirror Desk

ಕಡಿಮೆ ಮಕ್ಕಳಿರುವ ಶಾಲೆಗಳ ವಿಲೀನ ಶಾಸಕರಿಂದ ಸಲಹೆ: ಶಿಕ್ಷಣ ಸಚಿವ ಮಧುಬಂಗಾರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.