Malenadu Mitra
ರಾಜ್ಯ

ಪಠ್ಯದಲ್ಲಿ ಹಸೆ ಚಿತ್ತಾರ: ಮಧುಬಂಗಾರಪ್ಪ

ಹಸೆ ಚಿತ್ತಾರವನ್ನು ಪಠ್ಯಕ್ರಮದಲ್ಲಿ ಸೇರಿಸುತ್ತೇವೆ : ಸಚಿವ ಮಧು ಬಂಗಾರಪ್ಪ.

ಬಲೆಗಾರು/ಸಾಗರ: ಮಲೆನಾಡಿನ ದೀವರು ಸಮುದಾಯ ಪೋಷಿಸಿಕೊಂಡು ಬಂದಿರುವ ಹಸೆ ಚಿತ್ತಾರ ಕಲೆಯನ್ನು ಶಾಲೆಗಳ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಅವರು ಇಂದು ಬಲೆಗಾರು ಗ್ರಾಮದಲ್ಲಿ ಕರ್ನಾಟಕ ದೀವರು ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಚಾಲನೆ‌ ಹಾಗೂ ದೀವರು ಹಸೆ ಚಿತ್ತಾರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಹಸೆ ಚಿತ್ತಾರದಂತ ಕಲೆಯು ಸಾವಿರಾರು ವರ್ಷಗಳಿಂದ ಮಹಿಳೆಯರು ಕಾಪಿಟ್ಟುಕೊಂಡು ಬಂದಿದ್ದು ಕರ್ನಾಟಕದ ನೆಲಮೂಲದ ಕಲೆಯಾಗಿದೆ ಎಂದರು. ಇದರ ಪ್ರೋತ್ಸಾಹಕ್ಕೆ ಹಾಗೂ ನಮ್ಮ ಸಂಸ್ಕೃತಿ ಕಲೆಗಳ ಉಳಿವಿಗೆ ನಾನು ನಿಮ್ಮ ಸಂಸ್ಥೆಯ ಪ್ರಯತ್ನಕ್ಕೆ ಕೈಜೋಡಿಸುತ್ತೇನೆ ಎಂದವರು ಹೇಳಿ ಸಂಸ್ಥೆಗೆ ಶುಭಹಾರೈಸಿದರು.‌

ಇದಕ್ಕೂ ಮೊದಲು ಹಸೆ ಚಿತ್ತಾರ ಕ್ಯಾಲೆಂಡರ್ ಬಿಡುಗಡೆಗೊಳಿದ ಮಾಜಿ ಸಭಾಪತಿ ಡಾ. ಕಾಗೋಡು ತಿಮ್ಮಪ್ಪನವರು ನಮ್ಮ ಹೊಸ ತಲೆಮಾರು ಇಂತಹ ಕ್ಯಾಲೆಂಡರ್ ಮೂಲಕ ಸಂಸ್ಕೃತಿಯನ್ನು ಉಳಿಸುತ್ತಿರುವುದು ಮತ್ತು ಹಿಂದೆ ನಡೆದ ಹೋರಾಟಗಳನ್ನು ಕ್ಯಾಲೆಂಡರ್ ಮುಖಾಂತರ ಸ್ಮರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ದೀವರು ಹಸೆ ಚಿತ್ತಾರ ಕಲಾವಿದೆಯರಾದ ಲಕ್ಷ್ಮಮ್ಮ ಗಡೆಮನೆ, ರಾದಾ ಸುಳ್ಳೂರು, ಸ್ವಾತಿ ಪುನೀತ್ ಹಾಗೂ ಪವಿತ್ರಾ ಮೋಹನ್ ನಾಯ್ಕ್ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ರೈತ ಹೋರಾಟಗಾರ ಶಿವಾನಂದ ಕುಗ್ವೆ, ಈಶ್ವರನಾಯ್ಕ, ಎಸ್ ಪಿ ಕೆರಿಯಪ್ಪ, ಸಂಧ್ಯಾ ಸಿಗಂದೂರು, ವಿದ್ಯಾ ಸುಳ್ಳಳ್ಳಿ ಉಪಸ್ಥಿತರಿದ್ದರು.
ದಿವ್ಯಶ್ರೀ ಅದರಂತೆ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಂಸ್ಥೆಯ ಸಂಚಾಲಕ ವೆಂಕಟೇಶ್ ಮೆಳವರಿಗೆ ಎಲ್ಲರನ್ನು ವಂದಿಸಿದರು.

Ad Widget

Related posts

ಸಿಗಂದೂರು ಕ್ಷೇತ್ರದಿಂದ ಜನಮುಖಿ ಕೆಲಸ, ನವರಾತ್ರಿ ಕಾರ್ಯಕ್ರಮದಲ್ಲಿ ಅರುಣಾನಂದ ಸ್ವಾಮೀಜಿ ಪ್ರಶಂಸೆ

Malenadu Mirror Desk

ಆರ್‌ಎಸ್ಸೆಸ್ ಬೆಂಬಲ ಕೊಟ್ಟರೆ ತಪ್ಪೇನು ?: ಟಗರಿಗೇ ಡಿಚ್ಚಿ

Malenadu Mirror Desk

ಕರೋಕೆ ಗಾಯನ ಸ್ಪರ್ಧೆ,ಶಿವಮೊಗ್ಗ ಪ್ರೆಸ್ ಟ್ರಸ್ಟ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜನೆ, ಜಿಲ್ಲೆಯ ವಿವಿಧೆಡೆಯಿಂದ 100 ಕ್ಕೂ ಹೆಚ್ಚು ಸ್ಪರ್ಧಿಗಳ ನೋಂದಣಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.