Malenadu Mitra
ರಾಜ್ಯಶಿವಮೊಗ್ಗ

ಸಿಎಂ ತವರಲ್ಲಿ ದ್ವಿಶತಕ ದಾಟಿದ ಸೋಂಕು, ಒಂದು ಸಾವು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಬೇಕೊ ಬೇಡ್ವೊ ಎಂದು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ತವರು ಜಿಲ್ಲೆ ಶೀವಮೊಗ್ಗದ ಕೊರೊನ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ.
ಸೋಮವಾರ ಒಂದೇ ದಿನ ಒಟ್ಟು 219 ಪ್ರಕರಣಗಳು ದಾಖಲಾಗಿವೆ. ಒಬ್ಬರು ಸಾವಿಗೀಡಾಗಿದ್ದಾರೆ. ಇದರಲ್ಲಿ ಉಕ್ಕಿನ ಭದ್ರಾವತಿಯಲ್ಲಿ ದಾಖಲೆಯ 93 ಕೊರೊನ ಪಾಸಿಟಿವ್ ಪ್ರಕರಣಗಳಿವೆ. ಉಳಿದಂತೆ ಶಿವಮೊಗ್ಗ ತಾಲೂಕು 47, ಶಿಕಾರಿಪುರ 9, ತೀರ್ಥಹಳ್ಳಿ 2, ಸೊರಬ 16,ಸಾಗರ 22, ಹೊಸನಗರ 24 ಹಾಗೂ ಇತರೆ ಜಿಲ್ಲೆಯಿಂದ ಬಂದ 6 ಮಂದಿಯಲ್ಲಿ ಕೊರೊನ ವೈರಸ್ ಪತ್ತೆಯಾಗಿದೆ. ಒಟ್ಟು 10 ವಿದಾರ್ಥಿಗಳಲ್ಲಿ ಕೊರೊನ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 879 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಆರೊಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Ad Widget

Related posts

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಸಿಎಂ ತಾಕತ್ತು ಪ್ರದರ್ಶಿಸಲಿ: ಮಧು ಬಂಗಾರಪ್ಪ ಸವಾಲು

Malenadu Mirror Desk

ಯಶಸ್ಸಿನ ಮೆಟ್ಟಿಲು ಹತ್ತುವುದು ಸವಾಲು :ಕೆ.ಎ.ದಯಾನಂದ ಅವರ “ಹಾದಿಗಲ್ಲು” ಕೃತಿಯ ಬಿಡುಗಡೆಗೊಳಿಸಿ ಪ್ರೊ. ಚೆನ್ನಿ ಹೇಳಿಕೆ

Malenadu Mirror Desk

ಲೋಲಿತ್ ಅಂತ ಅವಸರವೇನಿತ್ತು ನಿನಗೆ ?
ಆರ್ಥೋ ಸರ್ಜನ್ ಸಾವಿಗೆ ಕಾರಣ ಏನು ಗೊತ್ತೇ….

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.