Malenadu Mitra
ರಾಜ್ಯಸಾಗರ

ಪೆಟ್ರೋಲ್ ದರ ಏರಿಕೆಯಿಂದ ಜನಜೀವನ ಕಷ್ಟ :ಕಾಗೋಡು

ಪೆಟ್ರೋಲ್ ದರ ಲೀಟರ್‌ಗೆ ನೂರರ ಗಡಿದಾಟಿರುವುದನ್ನು ಖಂಡಿಸಿ ಸಾಗರದಲ್ಲಿ ಅಣಕು ಸಂಭ್ರಮ ಆಚರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕೇಕ್ ಕತ್ತರಿಸುವ ಮೂಲಕ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿದರು. ಕೊರೊನದಂತಹ ಸಂಕಷ್ಟದ ಕಾಲದಲ್ಲಿಯೂ ಪೆಟ್ರೋಲ್‌ದರ ನೂರರ ಗಡಿದಾಟಿರುವುದು ಜನಸಾಮಾನ್ಯರ ಮೇಲೆ ದೊಡ್ಡ ಪೆಟ್ಟು ನೀಡಿದೆ. ಜನರಿಗೆ ಉದ್ಯೋಗ, ವಹಿವಾಟು ಮತ್ತು ಕೂಲಿಗಳು ಇಲ್ಲ ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾತ್ರ ಆಗುತ್ತಿದೆ. ಇದನ್ನು ಎಲ್ಲರೂ ಖಂಡಿಸಬೇಕೆಂದರು.
ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬಾಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಧಮಾಲತಿ ಕಲ್ಲಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಮ್ಮ ಪ್ರಮುಖರಾದ ಪರಿಮಳ,ರೇಷ್ಮಾಕೌಸರ್ ಮತ್ತಿತರರು ಭಾಗವಹಿಸಿದ್ದರು.

Ad Widget

Related posts

ಸೊರಬಕ್ಕೆ ಮಧು ಬಂಗಾರವೊ.. ಕುಮಾರ ಕೃಪೆಯೊ,.. ಅಣ್ತಮ್ಮ ನಡುವೆ ತೀವ್ರ ಪೈಪೋಟಿ, ಜೆಡಿಎಸ್ ಸ್ಪೀಡ್ ಬ್ರೇಕರ್

Malenadu Mirror Desk

ಭದ್ರಾವತಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ಹಲ್ಲೆ

Malenadu Mirror Desk

ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್ ಇಬ್ಬರ ಬರ್ಬರ ಕೊಲೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.