Malenadu Mitra
ರಾಜ್ಯಸಾಗರ

ಸಾಗರ ಕಾಸ್ಪಾಡಿ ಕೆರೆಗೆ ಬಿದ್ದ ಬಸ್:27ಕ್ಕೂ ಹೆಚ್ಚು ಜನಕ್ಕೆ ಗಾಯ , ಒಬ್ಬ ಸಾವು

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಕೆರೆಗೆ ಸರಕಾರಿ ಬಸ್ ಉರುಳಿಬಿದ್ದು ಯುವಕನೋರ್ವ ಸಾವಿಗೀಡಾಗಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.

ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ಚಾಲಕ ಎದುರಿನಿಂದ ಬಂದ ಬೈಕಿಗೆ ಢಿಕ್ಕಿ ಆಗುವುದನ್ನು ತಪ್ಪಿಸಲು ಹೋದಾಗ ಬಸ್ ನೇರವಾಗಿ ಕೆರೆಗೆ ಉರುಳಿದೆ.

ಶಿವಮೊಗ್ಗದಿಂದ ಸಿಗಂದೂರಿಗೆ ಬೈಕಲ್ಲಿ ಹೊರಟಿದ್ದ ದೀಪಕ್ ಮತ್ತು ಶಬರೀಶ್ ಬೈಕ್ ಗೆ ಬಸ್ ಡಿಕ್ಕಿಯಾಗಿ ಕೆರೆಗೆ ಹಾರಿದೆ. ತೀವ್ರ ಗಾಯಗೊಂಡಿದ್ದ ದೀಪಕ್ ಅಸುನೀಗಿದ್ದು, ಶಬರೀಶ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ನಲ್ಲಿ 27 ಮಂದಿ ಪ್ರಯಾಣಿಕರಿದ್ದರು. ರಕ್ಷಣಾ ಕಾರ್ಯ ಮುಂದುವರಿದಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget

Related posts

ಅಮೃತ ವೃತ್ತಕ್ಕೆ ನಿವೃತ್ತ ಪ್ರಾಚಾರ್ಯ ಗಣೇಶ್‍ಮೂರ್ತಿ ಹೆಸರು

Malenadu Mirror Desk

ವಿಕ್ರಂ ಗೌಡ ಎನ್ ಕೌಂಟರ್: ದಶಕದ ಬಳಿಕ ನಕ್ಸಲರ ಇರುವಿಕೆ ಮತ್ತೆ ಸಾಬೀತು

Malenadu Mirror Desk

ಹಿಂದೂ ಕಾರ್ಯಕರ್ತನ ಕೊಲೆ ಆರೋಪಿಗಳ ಸುಳಿವು ಸಿಕ್ಕಿದೆ ಶೀಘ್ರ ಬಂಧಿಸಲಾಗುವುದು. ಜನರು ಶಾಂತಿಕಾಪಾಡಬೇಕು: ಗೃಹ ಸಚಿವ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.