Malenadu Mitra
ರಾಜ್ಯಶಿವಮೊಗ್ಗಸಾಗರ

ಗ್ರಾಮ ಪಂಚಾಯಿತಿ ಜಾಗಗಳಲ್ಲಿ ಮೊಬೈಲ್ ಟವರ್

ಹಿನ್ನೀರ ಸಂತ್ರಸ್ತರ ನೆಟ್ವರ್ಕ್ ಸಮಸ್ಯೆ ಕುರಿತ ಸಭೆ


ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸೋಮವಾರ ನೆಟ್ವರ್ಕ್ ಸಮಸ್ಯೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕರೂರು, ಭಾರಂಗಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ, ಶಾಲಾ ಆವರಣಗಳಲ್ಲಿ ಆಫ್ಟಿಕಲ್ ಫೈಬರ್ ಸ್ಥಾಪಿಸುವ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು.

ನೆಟ್ ವರ್ಕ್ ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿ ಕಂಪನಿಯವರು ¿ŠೈýŠಸಿý Šುý ¡³್ಢ ್ಢ್ಜೈಬ ಮಲ್ಟಿ ಟವರ್ ಅಳವಡಿಸುವುದು. ಗ್ರಾ.ಪಂ ಹಾಗೂ ಸರ್ಕಾರಿ ಜಾಗಗಳಲ್ಲಿ ಕಡಿಮೆ ಖರ್ಚಿನಲ್ಲಿ ಮಿನಿ ಟವರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷೇತ್ರ ವ್ಯಾಪ್ತಿಯ ಕಟ್ಟಿನಕಾರು, ಹೊನಗಲು, ಅಡ್ಡೇರಿ, ಬುಕ್ಕಿವರೆ, ಹಾರೋಹಿತ್ಲು ಗ್ರಾಮಗಳಲ್ಲಿ ಸಾಧ್ಯತೆ ಇರುವ ಕಡೆ ನೂತನ ಟವರ್ ಅಳವಡಿಸಲು ನಿರ್ದೇಶಿಸಿದ್ದು. ಶೀಘ್ರದಲ್ಲಿ ಕಾಮಗಾರಿ ನೆಡೆಸಲು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಿಇಒ ವೈಶಾಲಿ, ಖಾಸಗಿ ನೆಟ್ ವರ್ಕ್ ಕಂಪನಿ ಮತ್ತುಬಿಎಸ್‍ಎನ್‍ಎಲ್ ಮುಖ್ಯಸ್ಥರು, ಪ್ರಸನ್ನ ಕೆರೆಕೈ, ನಾಗರಾಜ್ ಬೊಬ್ಬಿಗೆ, ವಿನಾಯಕ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Ad Widget

Related posts

ಎಸ್.ಬಂಗಾರಪ್ಪ ಯೋಜನೆಗಳು ಎಂದಿಗೂ ಜೀವಂತ: ಮಧು ಬಂಗಾರಪ್ಪ , ಮಾಜಿ ಮುಖ್ಯಮಂತ್ರಿಯ 90 ನೇ ವರ್ಷದ ಜನ್ಮದಿನ ಆಚರಣೆ

Malenadu Mirror Desk

ಮಲೆನಾಡಿಗರಿಂದ ಮಂಜುನಾಥ್ ಭಂಡಾರಿ ಅವರಿಗೆ ಆತ್ಮೀಯ ಅಭಿನಂದನೆ, ಮಾರ್ಚ್ 12 ರ ಶನಿವಾರ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್ ಉಳಿಸಿ: ರಸ್ತೆ ತಡೆ ನಡೆಸಿ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.