Malenadu Mitra
ರಾಜ್ಯಶಿವಮೊಗ್ಗ

ಕಳ್ಳತನವಾಗಿದ್ದ 22 ಬೈಕ್ ವಶ,ನಾಲ್ವರ ಬಂಧನ

ಜಿಲ್ಲೆ ಹಾಗೂ ಹೊರಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿರುವ ಸುಮಾರು ೧೦ ಲಕ್ಷ ಮೌಲ್ಯದ ೨೨ ಬೈಕ್ ಮತ್ತು ಸ್ಕೂಟರ್‌ಗಳನ್ನು ವಶಪಡಿಸಿಕೊಂಡಿರುವ ಶಿವಮೊಗ್ಗ ತುಂಗಾನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗನಗರದ ನಿವಾಸಿಗಳಾದ ಸುಹೇಲ್ ಪಾಶಾ,ಮೊಹಮದ್ ಹ್ಯಾರಿಸ್, ಫಜಲು ಹಾಗೂ ಸಾಹಿಲ್ ಶೇಟ್ ಬಂಧಿತ ಆರೋಪಿಗಳಾಗಿದ್ದಾರೆ. ಎಸ್ಪಿ ಲಕ್ಷಿö್ಮಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿಐ ದೀಪಕ್ ಎಂ.ಎಸ್ . ಪಿಎಸ್‌ಐಗಳಾದ ಈರೇಶ್ , ದೂದ್ಯಾನಾಯ್ಕ , ಭಾರತಿ ಬಿ.ಹೆಚ್ ಹಾಗೂ ಸಿಬ್ಬಂದಿಗಳಾದ ಟೀಕಪ್ಪ, ಉಮೇಶ್ , ಕಿರಣ್ ಮೋರೆ , ಅರುಣ್ ಕುಮಾರ್ ಸಂದೀಪ್, ರಾಜು ಕೆ ಆರ್ , ಲಂಕೇಶಕುಮಾರ್, ಅರುಣ್ ಕುಮಾರ್, ಕಾಂತರಾಜ ರಾಜೇಶಗೌಡ ಭಾಗವಹಿಸಿದ್ದರು.

Ad Widget

Related posts

ಹಿಂದೂ ಧರ್ಮ ಮತ್ತಷ್ಟು ಗಟ್ಟಿಗೊಳ್ಳಬೇಕು

Malenadu Mirror Desk

ಸಕ್ರೆಬೈಲ್ ಸಮೀಪ ಅಪಘಾತ: ಸಾವು

Malenadu Mirror Desk

15 ದಿನದಲ್ಲಿ ಕೃಷಿ ಕಾರ್ಯಕ್ರಮಗಳ ಮಾರ್ಗಸೂಚಿ ಬಿಡುಗಡೆ : ಎನ್.ಚೆಲುವರಾಯಸ್ವಾಮಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.