Malenadu Mitra
ರಾಜ್ಯಶಿವಮೊಗ್ಗ

ತಡರಾತ್ರಿ ಪಾರ್ಟಿ ಮಾಡುವಾಗ ಸ್ನೇಹಿತರಿಂದಲೇ ಕೊಲೆ. ಶವ ಕೆರೆಯಲ್ಲಿ ಪತ್ತೆ.

ರಿಪ್ಪನ್ ಪೇಟೆ ಸಮೀಪದ ಗರತಿ ಕೆರೆಯಲ್ಲಿ ಬುಧವಾರ ತಡರಾತ್ರಿ ತನ್ನ ಸ್ನೇಹಿತರಿಂದಲೇ ವ್ಯಕ್ತಿಯೊರ್ವ ಕೊಲೆಯಾಗಿ  ಶವ ಗರತಿ ಕೆರೆ ಗ್ರಾಮದ ಆ ವುಕ ರಸ್ತೆಯ ಕೆರೆಯಲ್ಲಿ ಪತ್ತೆಯಾಗಿದೆ.
ಗರತಿ ಕೆರೆ ಗ್ರಾಮದ ಸತೀಶ್ ಶೆಟ್ಟಿ. ಕೋಳಿ ಪಯಾಜ್. ಕೃಷ್ಣ ಎಂಬ ಸ್ನೇಹಿತರುಗಳು ಸೇರಿ ಬುಧವಾರ ತಡರಾತ್ರಿ ಪಾರ್ಟಿ ಮಾಡುವಾಗ ಮೂವರ ನಡುವೆ ಜಗಳ ಉಂಟಾಗಿ ಕೋಳಿ ಪಯಾಜ್ ಹಾಗೂ ಕೃಷ್ಣ ಸೇರಿ ಸತೀಶ್ ಶೆಟ್ಟಿ ಗೆ ಕೊಲೆ ಮಾಡಿ ಗರತಿ ಕೆರೆ ಗ್ರಾಮದ ಮೂಲ ಮೋಹನ್ ಕುಮಾರ್ ಅವರಿಗೆ ಸೇರಿದ ವೈನ್ ಶಾಪ್ ಸಮೀಪದಲ್ಲಿರುವ ಕೆರೆಗೆ ಶವನ್ನು ಬಿಸಾಡಿ ಹೋಗಿದ್ದರು.
ಗ್ರಾಮಸ್ಥರು ಕೋಳಿ ಪಯಾಜ್ ನನ್ನು ಹಿಡಿದು ಸರಿಯಾಗಿ ರಿಪೇರಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೋರ್ವ ಆರೋಪಿ ಕೃಷ್ಣ ನಾಪತ್ತೆಯಾಗಿದ್ದು ಪೊಲೀಸರು ಹಾಗೂ ಗ್ರಾಮಸ್ಥರು ಆರೋಪಿಯ ಪತ್ತೆಗಾಗಿ ಹುಡುಕಾಡುತ್ತಿದ್ದಾರೆ. ಪ್ರಕರಣ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ 

Ad Widget

Related posts

ಹೊಸಗದ್ದೆ ಪ್ರಭಾ ಶರಣಾಗತಿ , ಅನಾರೋಗ್ಯ ಪೀಡಿತ ಪ್ರಭಾಗೆ ಶರಣಾಗತಿಗೆ ತಮಿಳುನಾಡು ಪೊಲೀಸರ ಸಹಕಾರ : ಮಲೆನಾಡಲ್ಲಿ ಕ್ಷೀಣಿಸಿದ ನಕ್ಸಲ್ ಚಳವಳಿ

Malenadu Mirror Desk

ಇತಿಹಾಸದ ಅರಿವು ಎಲ್ಲರಿಗಿರಬೇಕು, ಕೆಳದಿ ಉತ್ಸವಕ್ಕೆ ಚಾಲನೆ ನೀಡಿದ ಶಾಸಕ ಹಾಲಪ್ಪ ಅಭಿಮತ

Malenadu Mirror Desk

ಕಾರಿಗೆ ಟಿಪ್ಪರ್ ಡಿಕ್ಕಿ ಇಬ್ಬರು ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.