Malenadu Mitra
ರಾಜ್ಯ

ಹುಡುಗ-ಹುಡುಗಿ ಬಸ್ಸಿಂದ ಹಾರಿದ್ಯಾಕೆ ?


ತಾವು ಕುಳಿತಿದ್ದ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದಕ್ಕೆ ಭಯಬಿದ್ದ ಇಬ್ಬರು ಹುಡುಗಿಯರು ಹಾಗೂ ಒಬ್ಬ ಹುಡುಗ ಬಸ್ ಚಲಿಸುತ್ತಿದ್ದಾಗಲೇ ಹೊರಕ್ಕೆ ಜಿಗಿದು ಗಾಯಗೊಂಡಿದ್ದಾರೆ.
ಸಾಗರದಿಂದ ಕಾರ್ಗಲ್‌ಗೆ ಬಸ್ ಹೋಗುತ್ತಿದ್ದಾಗ ಬಸ್‌ನಲ್ಲಿ ಕುಳಿತಿದ್ದ ಕಾರ್ಗಲ್‌ನ ಶಿಲ್ಪಾ, ಹುಣಸೂರಿನ ಮಧುರಾ ಹಾಗೂ ಯುವಕನೊಬ್ಬ ಜಿಗಿದಿದ್ದಾರೆ. ತೀವ್ರ ಗಾಯಗೊಂಡ ಮೂವರನ್ನೂ ಸ್ಥಳೀರಾದ ಜಾವೇದ್ ತಮ್ಮ ಟಾಟಾ ಏಸ್ ವಾಹನದಲ್ಲಿ ಕರೆತಂದು ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಯಿತು. ಚಲಿಸುತ್ತಿದ್ದ ಬಸ್‌ನಿಂದ ಈ ಮೂವರೂ ಕೆಳಗೆ ಹಾರಲು ಬಸ್‌ಗೆ ಬೆಂಕಿಬಿದ್ದಿರುವುದು ಕಾರಣವಲ್ಲ. ಬಸ್‌ನಲ್ಲಿದ್ದ ಅಗ್ನಿನಿರೋಧಕ ಸಿಲಿಂಡರ್ ಲೀಕ್ ಆಗಿ ಅದರಿಂದ ಗ್ಯಾಸ್ ಬಂದಿದ್ದೇ ಈ ಪ್ರಯಾಣಿಕರು ಆತಂಕಗೊಳ್ಳಲು ಕಾರಣ ಎನ್ನಲಾಗಿದೆ. ಸಿಲಿಂಡರ್ ನಿಂದ ಬಂದ ಹೊಗೆ ಬೆಂಕಿಹೊತ್ತಿರುವುದಕ್ಕೆ ಬರುತ್ತಿದೆ ಎಂದು ಭಾವಿಸಿ ಅವಸರಕ್ಕೆ ಬಿದ್ದ ಮೂವರು ಜಿಗಿದು ಈಗ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget

Related posts

ಕೃಷಿ ವಿವಿಗೆ ಕೆಳದಿ ಶಿವಪ್ಪನಾಯಕನ ಹೆಸರು : ಬಿ.ಎಸ್.ಯಡಿಯೂರಪ್ಪ

Malenadu Mirror Desk

ಒಂದು ವರ್ಷದಲ್ಲಿ 20 ಸಾವಿರ ಶಿಕ್ಷಕರ ನೇಮಕಸಿಗಂದೂರು ನವರಾತ್ರಿ ಉತ್ಸವದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿಕೆ

Malenadu Mirror Desk

ಜಿಲ್ಲಾ ಕಾಂಗ್ರೆಸ್‌ನಲ್ಲಿ ಬದಲಾವಣೆಯ ಗಾಳಿ, ಅಧ್ಯಕ್ಷಗಾದಿಗಾಗಿ ಹಲವರ ಪ್ರಯತ್ನ, ಮಧು ಬಂಗಾರಪ್ಪ ಒಲವಿದ್ದವರಿಗಿದೆ ಅದೃಷ್ಟ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.