Malenadu Mitra
ರಾಜ್ಯಶಿವಮೊಗ್ಗ

ಜನರವಿಶ್ವಾಸ ಗಳಿಸಿ ಸಂಘಟನೆಯಲ್ಲಿ ತೊಡಗಿ

ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಈಗಿನಿಂದಲೇ ಜನತೆಯ ವಿಶ್ವಾಸಗಳಿಸುತ್ತಾ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಕರೆ ನೀಡಿದರು.
ತಾಲೂಕಿನ ಕುಬಟೂರು ಗ್ರಾಮದಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ಹಾಗೂ ಮಧು ಬಂಗಾರಪ್ಪ ಬೆಂಬಲಿತ ಗ್ರಾ.ಪಂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಗ್ರಾ.ಪಂ ಚುನಾವಣೆಯಲ್ಲಿ ಪರಾಭವಗೊಂಡವರು ಧೃತಿಗೆಡದೆ ಸಂಘಟನೆಯಲ್ಲಿ ತೊಡಗಿಕೊಂಡು ಜನತೆಯ ನಡುವೆ ಇರಬೇಕು. ಈಗಾಗಲೇ ಹಲವರು ಬಿಜೆಪಿ ಬೆಂಬಲಿತರು ಸಹ ನಮ್ಮೊಂದಿಗೆ ಕೈ ಜೋಡಿಸಲು ಮುಂದಾಗಿದ್ದಾರೆ. ಮೀಸಲಾತಿಗೆ ಅನುಗುಣವಾಗಿ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಸದಸ್ಯರು ಜಾಗೃತರಾಗಿರಬೇಕು. ತಾಲ್ಲೂಕಿನಲ್ಲಿ ಬಹುಪಾಲು ಗ್ರಾಪಂ ಅಧಿಕಾರ ಹಿಡಿಯಲು ತಾವು ಸಹ ಎಲ್ಲಾ ರೀತಿಯ ರಾಜಕಾರಣ ಮಾಡುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದರು.
ಕ್ಷೇತ್ರದ ಆಡಳಿತ ವ್ಯವಸ್ಥೆ ಬಗ್ಗೆ ಜನತೆ ಬೇಸತ್ತಿದ್ದಾರೆ. ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ಪಕ್ಷದಲ್ಲಿಯೇ ಒಡಕು ತಂದಿದ್ದು, ಮೂಲ ಬಿಜೆಪಿಗರ ಸ್ಥಿತಿ ಹೇಳತೀರದಾಗಿದೆ. ಶಾಸಕರ ಸ್ಟೆಂಡ್ ರಾಜಕಾರಣ ನಡೆಯುವುದಿಲ್ಲ. ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬ್ಯುಜಿನೆಸ್ ಜನತಾ ಪಾರ್ಟಿಯ ಆಟವೂ ನಡೆಯುವುದಿಲ್ಲ. ಜನತೆಯ ನಿರೀಕ್ಷೆಯಂತೆ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಪ್ರಕಟಗೊಳಿಸುವುದಾಗಿ ತಿಳಿಸಿದರು.
ಜೆಡಿಎಸ್ ಬ್ಲಾಕ್ ಅಧ್ಯಕ್ಷರಾದ ಎಚ್. ಗಣಪತಿ, ಕೆ.ಪಿ. ರುದ್ರಗೌಡ, ಕಾಂಗ್ರೆಸ್ ಸೊರಬ ಬ್ಲಾಕ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಕಾರ್ಯದರ್ಶಿ ಹಬೀಬುಲ್ಲಾ ಹವಾಲ್ದಾರ್, ಜಿ.ಪಂ ಸದಸ್ಯರಾದ ವೀರೇಶ್ ಕೊಟಗಿ, ಶಿವಲಿಂಗೇಗೌಡ, ತಾರಾ ಶಿವಾನಂದ, ತಾ.ಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಎಪಿಎಂಸಿ ಅಧ್ಯಕ್ಷ ಜಯಶೀಲಪ್ಪ, ಮುಖಂಡರಾದ ಎಂ.ಡಿ.ಶೇಖರ್ ಬಂಗಾರಪ್ಪ ಗೌಡ, ಎಲ್.ಜಿ. ರಾಜಶೇಖರ್, ಸದಾನಂದ ಗೌಡ, ಜಯಶೀಲಗೌಡ, ಸುನೀಲ್ ಗೌಡ, ಎನ್.ಜಿ. ನಾಗರಾಜ ಚಂದ್ರಗುತ್ತಿ, ಶಿವಕುಮಾರ್ ಕಾಸ್ವಾಡಿಕೊಪ್ಪ ಇತರರಿದ್ದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ವಿಜೇತರನ್ನು ಸನ್ಮಾನಿಸಲಾಯಿತು.


ಸೊರಬ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಈಗಿನಿಂದಲೇ ಜನತೆಯ ವಿಶ್ವಾಸಗಳಿಸುತ್ತಾ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಕರೆ ನೀಡಿದರು.
ತಾಲೂಕಿನ ಕುಬಟೂರು ಗ್ರಾಮದಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ಹಾಗೂ ಮಧು ಬಂಗಾರಪ್ಪ ಬೆಂಬಲಿತ ಗ್ರಾ.ಪಂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಗ್ರಾ.ಪಂ ಚುನಾವಣೆಯಲ್ಲಿ ಪರಾಭವಗೊಂಡವರು ಧೃತಿಗೆಡದೆ ಸಂಘಟನೆಯಲ್ಲಿ ತೊಡಗಿಕೊಂಡು ಜನತೆಯ ನಡುವೆ ಇರಬೇಕು. ಈಗಾಗಲೇ ಹಲವರು ಬಿಜೆಪಿ ಬೆಂಬಲಿತರು ಸಹ ನಮ್ಮೊಂದಿಗೆ ಕೈ ಜೋಡಿಸಲು ಮುಂದಾಗಿದ್ದಾರೆ. ಮೀಸಲಾತಿಗೆ ಅನುಗುಣವಾಗಿ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಸದಸ್ಯರು ಜಾಗೃತರಾಗಿರಬೇಕು. ತಾಲ್ಲೂಕಿನಲ್ಲಿ ಬಹುಪಾಲು ಗ್ರಾಪಂ ಅಧಿಕಾರ ಹಿಡಿಯಲು ತಾವು ಸಹ ಎಲ್ಲಾ ರೀತಿಯ ರಾಜಕಾರಣ ಮಾಡುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದರು.
ಕ್ಷೇತ್ರದ ಆಡಳಿತ ವ್ಯವಸ್ಥೆ ಬಗ್ಗೆ ಜನತೆ ಬೇಸತ್ತಿದ್ದಾರೆ. ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ಪಕ್ಷದಲ್ಲಿಯೇ ಒಡಕು ತಂದಿದ್ದು, ಮೂಲ ಬಿಜೆಪಿಗರ ಸ್ಥಿತಿ ಹೇಳತೀರದಾಗಿದೆ. ಶಾಸಕರ ಸ್ಟೆಂಡ್ ರಾಜಕಾರಣ ನಡೆಯುವುದಿಲ್ಲ. ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬ್ಯುಜಿನೆಸ್ ಜನತಾ ಪಾರ್ಟಿಯ ಆಟವೂ ನಡೆಯುವುದಿಲ್ಲ. ಜನತೆಯ ನಿರೀಕ್ಷೆಯಂತೆ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಪ್ರಕಟಗೊಳಿಸುವುದಾಗಿ ತಿಳಿಸಿದರು.
ಜೆಡಿಎಸ್ ಬ್ಲಾಕ್ ಅಧ್ಯಕ್ಷರಾದ ಎಚ್. ಗಣಪತಿ, ಕೆ.ಪಿ. ರುದ್ರಗೌಡ, ಕಾಂಗ್ರೆಸ್ ಸೊರಬ ಬ್ಲಾಕ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಕಾರ್ಯದರ್ಶಿ ಹಬೀಬುಲ್ಲಾ ಹವಾಲ್ದಾರ್, ಜಿ.ಪಂ ಸದಸ್ಯರಾದ ವೀರೇಶ್ ಕೊಟಗಿ, ಶಿವಲಿಂಗೇಗೌಡ, ತಾರಾ ಶಿವಾನಂದ, ತಾ.ಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಎಪಿಎಂಸಿ ಅಧ್ಯಕ್ಷ ಜಯಶೀಲಪ್ಪ, ಮುಖಂಡರಾದ ಎಂ.ಡಿ.ಶೇಖರ್ ಬಂಗಾರಪ್ಪ ಗೌಡ, ಎಲ್.ಜಿ. ರಾಜಶೇಖರ್, ಸದಾನಂದ ಗೌಡ, ಜಯಶೀಲಗೌಡ, ಸುನೀಲ್ ಗೌಡ, ಎನ್.ಜಿ. ನಾಗರಾಜ ಚಂದ್ರಗುತ್ತಿ, ಶಿವಕುಮಾರ್ ಕಾಸ್ವಾಡಿಕೊಪ್ಪ ಇತರರಿದ್ದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ವಿಜೇತರನ್ನು ಸನ್ಮಾನಿಸಲಾಯಿತು.

Ad Widget

Related posts

2 A ಮೀಸಲಾತಿ ಕೊಡದಿದ್ದರೆ, ಬಿಜೆಪಿ ಪಂಚಮಸಾಲಿಗಳ ವಿಶ್ವಾಸ ಕಳೆದುಕೊಳ್ಳಲಿದೆ

Malenadu Mirror Desk

ಅಧಿವೇಶನಕ್ಕೆ ಗೈರಾಗಿರುವ ಈಶ್ವರಪ್ಪರಿಂದ ಶಿವಮೊಗ್ಗ ಜನತೆಗೆ ದ್ರೋಹ

Malenadu Mirror Desk

ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಗೆ ಸಿಗಂದೂರಲ್ಲಿ ವಿಶೇಷ ಪೂಜೆ,ಹೋಮ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.