Malenadu Mitra
ರಾಜ್ಯಶಿವಮೊಗ್ಗ

ಚಾಣಕ್ಯ ಕಪ್ ಕ್ರಿಕೆಟ್ ಪಂದ್ಯ ಆರಂಭ

ಶಿವಮೊಗ್ಗದಲ್ಲಿ ವಿಪ್ರ ಯುವ ಪರಿಷತ್ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಚಾಣಕ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕ್ರೀಡೆ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗೆ ಸಹಕಾರಿ. ವಿಭಿನ್ನ ಉದ್ಯೋಗದಲ್ಲಿರುವ ಸಮಾಜಬಾಂದವರು ಒಂದೆಡೆ ಸೇರಿ ಇಂತಹ ಪಂದ್ಯವಾಳಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಕ್ರೀಡೆ ನೆಪವಾದರೂ ಪರಸ್ಪರರು ಕೂಡಿ ಸಂಪರ್ಕ ಸಾಧಿಸುವುದು ಪ್ರಮುಖ ಎಂದರು. ಉದ್ಯಮಿ ಸುರೇಶ್ ಕೆ. ಬಾಳೆಗುಂಡಿ, ರಾಘವೇಂದ್ರ ಉಡುಪು, ಮ.ಸ.ನಂಜುಂಡಸ್ವಾಮಿ, ದಿನೇಶ್ ಜೋಷಿ ,ಮೈಲಾರಿ ರಾವ್ ಮತ್ತಿತರರಿದ್ದರು. ಕ್ರೀಡಾಕೂಟ ಎನ್.ಇ.ಎಸ್. ಮೈದಾನದಲ್ಲಿ ನಡೆಯುತ್ತಿದ್ದು, ರಾಜ್ಯದ ವಿವಿಧ ವಿಪ್ರ ಸಂಘಟನೆ ಪ್ರತಿನಿಧಿಸುವ ತಂಡಗಳು ಭಾಗವಹಿಸಿವೆ

Ad Widget

Related posts

160 ಕೋಟಿ ವೆಚ್ಚದಲ್ಲಿ ಸರ್ವಋತು ಜೋಗ ಜಲಪಾತ

Malenadu Mirror Desk

ಅಚ್ಚುಕಟ್ಟು ರಸ್ತೆಗಳ ಕಾಮಗಾರಿಗೆ ಚಾಲನೆ

Malenadu Mirror Desk

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದವರಿಗೆ ಅನ್ಯಾಯ, ಸರಕಾರದ ಯೋಜನೆಗಳ ಜಾರಿಯಲ್ಲಿ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.