Malenadu Mitra
ರಾಜ್ಯಶಿಕಾರಿಪುರ

ಶಿವಯೋಗಮಂದಿರದ ರೇವಣಸಿದ್ದ ಸ್ವಾಮೀಜಿ ಲಿಂಗೈಕ್ಯ

ಶಿಕಾರಿಪುರ ತಾಲೂಕು ಕಾಳೇನಹಳ್ಳಿಯ ಶಿವಯೋಗ ಮಂದಿರದ ಶ್ರೀ ಮ.ಮಿ.ಪ್ರ ರೇವಣಸಿದ್ದ ಸ್ವಾಮೀಜಿ ಮಂಗಳವಾರ ಲಿಂಗೈಕ್ಯರಾಗಿದ್ದಾರೆ.
ವೀರಶೈವ ಮಹಾಸಭಾದ ರೂವಾರಿಗಳೊಬ್ಬರಾಗಿದ್ದ ಶ್ರೀಗಳು ೧೯೭೭ ರಲ್ಲಿ ಪಟ್ಟಾಧಿಕಾರ ವಹಿಸಿಕೊಂಡು ೪೪ ವರ್ಷಗಳ ಕಾಲ ಮಠವನ್ನು ನಡೆಸಿದ್ದರು. ಈ ಅವಧಿಯಲ್ಲಿ ಅವರು ಅನೇಕ ಸಮಾಜ ಪರಿವರ್ತನ ಹಾಗೂ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಶ್ರೀಗಳನ್ನು ಶಿಕಾರಿಪುರದ ಭಕ್ತರು ನಡೆದಾಡುವ ದೇವರೆಂದೇ ಹೇಳುತ್ತಿದ್ದರು ಮತ್ತು ಭಕ್ತಿಭಾವದಿಂದ ನಡೆದುಕೊಳ್ಳುತ್ತಿದ್ದರು.


ಮುಖ್ಯಮಂತ್ರಿ ಸಂತಾಪ:

ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಶ್ರೀಗಳು ಸಮಾಜಕ್ಕೆ ದೊಡ್ಡ ಮಾರ್ಗದರ್ಶಕರಾಗಿದ್ದರು. ಅವರು ಮಾಡಿದ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಮಾದರಿ ಎಂದು ಸ್ಮರಿಸಿದ್ದಾರೆ.

Ad Widget

Related posts

ಬಂಗಾರಪ್ಪ ಎಂಬ ಬಂಡಾಯದ ನಿಜನಾಯಕ, ಬಡವರ ಬಂಧು,ವರ್ಣರಂಜಿತ ರಾಜಕಾರಣಿ

Malenadu Mirror Desk

ಮಳೆಗಾಲದಲ್ಲಿ ನೆರೆ ಪರಿಸ್ಥಿತಿ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಎಸ್. ಸೆಲ್ವಕುಮಾರ್

Malenadu Mirror Desk

ಭಾರತಿನಾಗರಾಜ್ ಪುರದಾಳು ಪಂಚಾಯಿತಿ ಅಧ್ಯಕ್ಷೆ,ಎಸ್.ಆರ್.ಗಿರೀಶ್ ಉಪಾಧ್ಯಕ್ಷ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.