Malenadu Mitra
ರಾಜ್ಯಶಿವಮೊಗ್ಗ

ವೀರಶೈವ ಯುವ ಸಂಗಮದಿಂದ ವಿಸ್ಮಯ

ವೀರಶೈವ ಯುವ ಸಂಗಮ ವತಿಯಿಂದ ವಿಸ್ಮಯ ಎಂಬ ವಿನೂತನ ಕಾರ್ಯಕ್ರಮ ಹಾಗೂ ಸಮಾಜದ ಗಣ್ಯರನ್ನು ಸನ್ಮಾನಿಸುವ ಮತ್ತು ಪ್ರಶಸ್ತಿ ಸಮಾರಂಭವನ್ನು ಏ.೧೮ ರ ಸಂಜೆ ೪.೩೦ಕ್ಕೆ ನಗರದ ಕುವೆಂಪು ರಂಗಮಂದಿರಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಯುವ ಸಂಗಮ ಅಧ್ಯಕ್ಷ  ಗಣೇಶ್ ಎಂ.ಅಂಗಡಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ವಿಭೂಷಿತ ಮಜಾ ಟಾಕೀಸ್ ಖ್ಯಾತಿಯ ಮಾನವ ಕಂಪ್ಯೂಟರ್ ಬಸವರಾಜ ಶಂಕರ ಉಂಬ್ರಾಣ ಇವರಿಂದಿ ವಿಸ್ಮಯ ಕಾರ್ಯಕ್ರಮ ಹಾಗೂ ಇತ್ತೀಚೆಗೆ ಸಮಾಜ ಬಾಂಧವರಿಗಾಗಿ ಹಮ್ಮಿಕೊಳ್ಳಲಾಗಿದ್ದ ಷಟಲ್ ಬ್ಯಾಡ್ಮಿಂಟನ್,ಕೇರಂ ಹಾಗೂ ಕ್ರೀಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದರು.


ಕಾರ್ಯಕ್ರಮದಲ್ಲಿ  ಸಂಸದ ಬಿ,ವೈ ರಾಘವೇಂದ್ರ,ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್,ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ,ಸೂಡಾ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್,ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ,ಡಿಹೆಚ್‌ಓ ಡಾ.ರಾಜೇಶ್ ಸುರಗಿಹಳ್ಳಿ,ಪಾಲಿಕೆ ಆಯುಕ್ತ ಚಿದಾನಂದ ವಟಾರೆ,ದೊಡ್ಡಪೇಟೆ ಠಾಣೆ ಸಿಪಿಐ ಹರೀಶ್ ಪಾಟೀಲ್,ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಶಂಕರಪ್ಪ ಇವರಿಗಳನ್ನು  ಸನ್ಮಾನಿಸಲಾಗುವುದು ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಸಂಗಮದ ಕಾರ್ಯದರ್ಶಿ ಎಂ,ಆರ್ ಸುರೇಶಪ್ಪ, ಹೆಚ್.ಎಂ ಉಮಾಶಂಕರ ಸ್ವಾಮಿ,ರಮೇಶ ಗೌಡ,ಮಂಜುನಾಥ್ ಉಪಸ್ಥಿತರರಿದ್ದರು.

Ad Widget

Related posts

ಉದ್ಯೋಗ ಭರವಸೆಯ ಪಾಲಿಮರ್/ಪ್ಲಾಸ್ಟಿಕ್ಸ್ ಡಿಪ್ಲೋಮಾ ಕೋರ್ಸ್ ಗಳು : ಏನೆಲ್ಲ ಕಲಿಯಬಹುದು,ಅವಕಾಶಗಳೇನು?

Malenadu Mirror Desk

ರಾಜ್ಯ ಬಿಜೆಪಿಯಲ್ಲಿ ಹೆಚ್ಚಾದ ಒಳಬೇಗುದಿ ಯಡಿಯೂರಪ್ಪರನ್ನೇ ಗುರಿಯಾಗಿಸಿತಾ , ಅಡ್ಜಸ್ಟ್ ಮೆಂಟ್ ರಾಜಕಾರಣದ ಆರೋಪ ?

Malenadu Mirror Desk

ಸಮಕಾಲೀನ‌ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರಗಳ‌ ತಳಹದಿ ಗಣಿತಶಾಸ್ತ್ರ: ಪ್ರೊ. ಉದಯ್ ಚಂದ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.