Malenadu Mitra
ರಾಜ್ಯ

ಬದುಕಲು ಮೊದಲು ವ್ಯವಸ್ಥೆಮಾಡಿ, ಆಮೇಲೆ ಚಿತಾಗಾರದ ಬಗ್ಗೆ ಯೋಚಿಸಿ

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಐಸಿಯು ಸೇರಿದಂತೆ ಸೌಲಭ್ಯ ಕಲ್ಪಿಸಿ ಜನರ ಬದುಕಿಸಬೇಕಾಗಿದೆ. ಇದನ್ನು ಬಿಟ್ಟು ಸತ್ತವರನ್ನು ಸುಡಲು ಸೌಲಭ್ಯ ಕಲ್ಪಿಸುವ ಸಲುವಾಗಿ ಸಂಘಟನೆಗಳ ಜೊತೆ ಕೈಜೋಡಿಸಿರುವುದು ಖಂಡನೀಯವೆಂದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾರ್ಗ ಸೂಚಿ ಅನ್ವಯ ಸಚಿವ ಈಶ್ವರಪ್ಪ ಪ್ರಕಟಿಸಿದ ಎಲ್ಲಾ ನಿರ್ಬಂಧಗಳು ಜಾರಿಯಲ್ಲಿವೆ. ಕೇವಲ ನಗರಕ್ಕೆ ಸೀಮಿತವಾಗಿ ಬಿಗಿ ಕ್ರಮ ಜಾರಿ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ದೂರಿದರು.
ವ್ಯಾಕ್ಸಿನೇಷನ್ ವ್ಯವಸ್ಥೆ ಮಾಡಿ, ದಿನಸಿ, ತರಕಾರಿಯನ್ನು ಮನೆ ಬಾಗಿಲಿಗೆ ಸರಬರಾಜು ಮಾಡಿ ಎಂದರೆ ಸಚಿವರು ಸ್ಮಶಾನಕ್ಕೆ ಭೇಟಿ ನೀಡುತ್ತಾರೆ. ಕೇಳಿದರೆ ಚಿತಾಗಾರ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಾರೆ. ಚಿತಾಗಾರ ವ್ಯವಸ್ಥೆ ಕೊನೆಯ ಆಯ್ಕೆಯಾಗಬೇಕು. ಸೋಂಕು ತಡೆಯಲು ಹಲವು ವ್ಯವಸ್ಥೆಗಳನ್ನು ಮಾಡಿದರೆ ಸೋಂಕು ತಡೆಯಬಹುದು ಎಂಬ ಮನೋಭಾವ ಬೆಳೆಸಬೇಕಿದೆ ಎಂದರು.

ಸಿದ್ದರಾಮಯ್ಯನವರು ಬಡವರಿಗೆ ೧೦ ಸಾವಿರ ಹಣ ನೀಡಿ ಎಂದರೆ ದುಡ್ಡನ್ನು ಪ್ರಿಂಟ್ ಮಾಡಬೇಕೆ ಎಂದು ಹೇಳುತ್ತಾರೆ. ಜನಪರ ಯೋಜನೆ ತರ ಹಣ ನೀಡಿ ಎಂದರೆ ಸಚಿವರೇ ಉಡಾಫೆ ಮಾಡುತ್ತಿದ್ದಾರೆ.
-ಕೆ.ಬಿ. ಪ್ರಸನ್ನಕುಮಾರ್

Ad Widget

Related posts

ಗ್ರಾಮೀಣ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ: ಕೆ.ಬಿ.ಶಿವಕುಮಾರ್

Malenadu Mirror Desk

ನ್ಯಾಯಾಧೀಶರಿಗೆ ರಾಜಕೀಯ ಅಧಿಕಾರ ನೀಡಿದರೆ ತಪ್ಪು ಸಂದೇಶ, ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯ

Malenadu Mirror Desk

ಜ್ಞಾನ, ವಿಜ್ಞಾನ, ಕೈಗಾರಿಕಾ ಹೊಸ ಸಮಾಜ ಕಟ್ಟಿದವರು ನಾರಾಯಣಗುರು: ಡಾ.ಮೋಹನ್ ಚಂದ್ರಗುತ್ತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.