Malenadu Mitra
Uncategorized

ಉಚಿತ ಆಂಬುಲೆನ್ಸ್‌ಗೆ ಚಾಲನೆ : ಡಾ.ಶ್ರೀನಿವಾಸ್‌ಕರಿಯಣ್ಣ

ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಸಾರ್ವಜನಿಕರು ಉಚಿತವಾಗಿ ನೀಡಿರುವ  ಆಂಬುಲೆನ್ಸ್‌ನ್ನು ಉಪಯೋಗಿಸಿಕೊಳ್ಳಬೇಕು ಎಂದು ಡಾ.ಶ್ರೀನಿವಾಸ್‌ಕರಿಯಣ್ಣ ಮನವಿ ಮಾಡಿದರು.
ಶುಕ್ರವಾರ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದಲ್ಲಿ ತಮ್ಮ ತಂದೆಯವರಾದ ದಿ.ಕರಿಯಣ್ಣನವರ ನೆನಪಿನಲ್ಲಿ ನೀಡಿದ್ದ ಉಚಿತ ಆಂಬುಲೆನ್ಸ್‌ಗೆ ಚಾಲನೆ ನೀಡಿ ಮಾತನಾಡಿದರು.
ಶಿವಮೊಗ್ಗ ಗ್ರಾಮಾಂತರದಲ್ಲಿ ಕೋವಿಡ್ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಉಚಿತ ಆಂಬುಲೆನ್ಸ್‌ ನೀಡಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಆರೋಗ್ಯದ ನಿಯಮಗಳನ್ನು ಪಾಲಿಸಬೇಕು ಕೊರೋನಾಕ್ಕೆ ಹೆದರಬಾರದು ಆದರೆ ಎಚ್ಚರಿಕೆಯಂತು ಬೇಕು. ವೈದ್ಯರಾಗಿ ಈ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಮುಖಂಡರುಗಳಾದ ಇಂತಿಯಾಜ್ ಮಜರ್ ಸಾಬ್,ದೇವೇಂದ್ರಪ್ಪ, ಜಗದೀಶ್, ರುದ್ರೇಶ್,  ಉಪಸ್ಥಿತರಿದ್ದರು.

Ad Widget

Related posts

ಊರ ದೇವಿ ಮಾರಮ್ಮನ ಜಾತ್ರೆ,ಸರ್ವರ ಹಬ್ಬ,ವದಂತಿಗಳಿಗೆ ಮನ್ನಣೆ ಬೇಡ :ದೇವಸ್ಥಾನ ಸಮಿತಿ

Malenadu Mirror Desk

ಗಣರಾಜ್ಯೋತ್ಸವ ಪರೇಡ್‌ಗೆ ರಂಗಾಯಣ ತಂಡ

Malenadu Mirror Desk

ಸಹ್ಯಾದ್ರಿ ಕಾಲೇಜು ಆವರಣದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಭಾರೀ ವಿರೋಧ : ಸ್ಥಳಾಂತರಕ್ಕೆ ಪಟ್ಟು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.