Malenadu Mitra
ರಾಜ್ಯಶಿವಮೊಗ್ಗಸಾಗರ

ಸಾಗರಕ್ಕೆ ಕೊರೊನ ಟೆಸ್ಟ್ ಲ್ಯಾಬ್ ಮಂಜೂರು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕೊರೊನ ಎರಡನೇ ಅಲೆ ಅಬ್ಬರ ಹೆಚ್ಚಾಗಿದ್ದು,ಇಲ್ಲಿನ ಶಂಕಿತರ ಸ್ವಾಬ್ ತೆಗೆದು ಆರ್.ಟಿ.ಪಿಸಿಆರ್ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳಿಸುವ ಅನಿವಾರ್ಯತೆ ಇದೆ. ಇದರ ವರದಿ ಬರುವುದು ಮೂರು ದಿನಗಳು ತಡವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಗರದಲ್ಲಿಯೇ ಆರ್‍ಟಿಪಿಸಿಆರ್ ಪ್ರಯೋಗಾಲಯ ಬೇಕೆಂದು ಶಾಸಕರು ಹಾಗೂ ಎಂ.ಎಸ್‍ಎಸ್‍ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶನಿವಾರ ಮನವಿ ಮಾಡಿದ್ದರು. ಮನವಿ ಪರಿಗಣಿಸಿದ ಮುಖ್ಯಮಂತ್ರಿಗಳೂ ಸ್ಥಳದಲ್ಲಿಯೇ ಪ್ರಯೋಗಾಲಯಕ್ಕೆ ಮಂಜೂರಾತಿ ನೀಡಿದ್ದಾರೆ. ಲ್ಯಾಬ್‍ಗೆ ಬೇಕಾದ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

Ad Widget

Related posts

ತಾಯಿ- ಮಗನ ಬಲಿ ಪಡೆದ ಮಹಾಮಾರಿ

Malenadu Mirror Desk

ಸಿಎಂ ತವರಲ್ಲಿ ತ್ರಿಶತಕ ದಾಟಿದ ಸೋಂಕು, ಮೂರು ಸಾವು

Malenadu Mirror Desk

ಶಿವಮೊಗ್ಗ ಗಲಭೆ ಸರ್ಕಾರ ಪ್ರಾಯೋಜಿತ ಕೃತ್ಯ: ಮುಸ್ಲಿಂ ಜಂಟಿ ಕ್ರಿಯಾ ಸಮಿತಿಯ ನೇರ ಆರೋಪ, ನ್ಯಾಯಾಲಯಕ್ಕೆ ಹೋಗ್ತೇವೆ ಎಂದ ಮುಖಂಡರು ಯಾಕೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.