Malenadu Mitra
ರಾಜ್ಯಶಿವಮೊಗ್ಗಸಾಗರ

ರಕ್ತದಾನ ಮಾಡುವ ಮೂಲಕ ರಕ್ತದಾನಿಗಳ ದಿನಾಚರಣೆ ಮಾಡಿದ ಡಾ.ರಾಜನಂದಿನಿ ಕಾಗೋಡು

ವಿಶ್ವ ರಕ್ಷದಾನಿಗಳ ದಿನದ ಅಂಗವಾಗಿ ಸೋಮವಾರ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆ ಹಾಗೂ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸ್ವತಃ ರಕ್ತದಾನ ಮಾಡಿ ಮಾತನಾಡಿದ ವೈದ್ಯರೂ, ಕೆಪಿಸಿಸಿ ಕಾರ್ಯದರ್ಶಿಯಾದ ಡಾ.ರಾಜನಂದಿನಿ ಕಾಗೋಡು ಅವರು, ರಕ್ತದಾನ ಸರ್ವಶ್ರೇಷ್ಠವಾದುದು. ಇನ್ನೊಬ್ಬರ ಜೀವ ಉಳಿಸುವ ಅವಕಾಶ ರಕ್ತದಾನದಿಂದ ಸಿಗುತ್ತದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಮತ್ತ ಜೀವದ ಮೌಲ್ಯ ಎಲ್ಲರಿಗೂ ಅರಿವಾಗಿದೆ. ಇಂತಹ ಹೊತ್ತಲ್ಲಿ ರಕ್ತದಾನ ಅತ್ಯಂತ ಅವಶ್ಯವಾಗಿದೆ. ರೋಟರಿ ಹಾಗೂ ರೆಡ್‌ಕ್ರಾಸ್ ಸಂಸ್ಥೆಗಳು ಈ ನಿಟ್ಟಿನಲ್ಲಿ ಯಾವತ್ತೂ ಜನಪರ ಕೆಲಸ ಮಾಡುತ್ತಿವೆ. ನಮ್ಮ ಯುವಜನರು ಯಾವುದೇ ಆತಂಕಪಡದೆ ರಕ್ತದಾನ ಮಾಡಬೇಕು. ಆರೋಗ್ಯವಂತೆ ವ್ಯಕ್ತಿಗಳು ರಕ್ತದಾನಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು. ಈ ಸಂದರ್ಭ ರೋಟರಿ ಮತ್ತು ರೆಡ್ ಕ್ರಾಸ್ ರಕ್ತನಿಧಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Ad Widget

Related posts

ಸಮಗ್ರ ಅಭಿವೃದ್ಧಿಗೆ ನನ್ನ ಜತೆಗೆ ಅಧಿಕಾರಿಗಳು ಕೈಜೋಡಿಸಬೇಕು: ಮಧು ಬಂಗಾರಪ್ಪ

Malenadu Mirror Desk

ಸಾಗರದ ಹಾಲಿ-ಮಾಜಿ ಶಾಸಕರಿಂದ ಧರ್ಮಸ್ಥಳದಲ್ಲಿ ಆಣೆ -ಪ್ರಮಾಣ ,ಟೀಕೆಗೊಳಗಾದ ಹಾಲಪ್ಪ-ಬೇಳೂರು ನಡೆ

Malenadu Mirror Desk

ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾಗಿ ಮಂಜುನಾಥ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.