Malenadu Mitra
ರಾಜ್ಯಶಿವಮೊಗ್ಗ

ನೂತನ ಕುಲಸಚಿವರಿಂದ ಅಧಿಕಾರ ಸ್ವೀಕಾರ

ಕುವೆಂಪು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ನೂತನ ಕುಲಸಚಿವರಾಗಿ ಅನುರಾಧ ಅವರು ಗುರುವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತಿ ಕುಲಸಚಿವ ಪ್ರೊ.ಎಸ್.ಎಸ್.ಪಾಟೀಲ್ ಅವರು ನೂತನ ಕುಲಸಚಿವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಕುಲಪತಿ ಪ್ರೊ.ವೀರಭದ್ರಪ್ಪ ಅವರು ಉಪಸ್ಥಿತರಿದ್ದರು.

ಶಿವಮೊಗ್ಗ ಎಡಿಸಿಯಾಗಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಅನುರಾಧಾ ಅವರನ್ನು ಸರಕಾರ ಕುವೆಂಪು ವಿವಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಪ್ರೊ.ಪಾಟೀಲ್ ಅವರನ್ನು ಈ ಹಿಂದೆಯೇ ಒಮ್ಮೆ ವರ್ಗಾವಣೆ ಮಾಡಿತ್ತಾದರೂ, ಆಗ ಒಂದೇ ದಿನದಲ್ಲಿ ತಮ್ಮ ವರ್ಗಾವಣೆ ಆದೇಶವನ್ನು ಪಾಟೀಲ್ ಅವರು ರದ್ದು ಮಾಡಿಸಿ ಅದೇ ಹುದ್ದೆಯಲ್ಲಿ ಮುಂದುವರಿದಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಿರಿಯ ಶ್ರೇಣಿ ಕೆ.ಎ.ಎಸ್ ಅಧಿಕಾರಿಯಾಗಿರುವ ಅನುರಾಧಾ ಅವರು ಶಿವಮೊಗ್ಗ ಎಡಿಸಿಯಾಗಿ ಕರ್ತವ್ಯ ಮಾಡುವ ಮೂಲಕ ಜನ ಪ್ರೀತಿ ಗಳಿಸಿದ್ದರು. ಈಗ ಶಿಕ್ಷಣ ಕ್ಷೇತ್ರದ ಆಡಳಿತಾತ್ಮ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Ad Widget

Related posts

ದುರಾಡಳಿತ, ಕುಟುಂಬ ರಾಜಕಾರಣದ ವಿರುದ್ಧ ಸ್ಪರ್ಧೆ,ಸಮಾಜವಾದಿ ಪಕ್ಷದಿಂದ ವಿ.ಜಿ.ಪರಶುರಾಮ್ ನಾಮಪತ್ರ ಸಲ್ಲಿಕೆ

Malenadu Mirror Desk

ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್ ಭೀಕರ ಹತ್ಯೆ.

Malenadu Mirror Desk

ಸಾಗರದ ಹಾಲಿ-ಮಾಜಿ ಶಾಸಕರಿಂದ ಧರ್ಮಸ್ಥಳದಲ್ಲಿ ಆಣೆ -ಪ್ರಮಾಣ ,ಟೀಕೆಗೊಳಗಾದ ಹಾಲಪ್ಪ-ಬೇಳೂರು ನಡೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.