Malenadu Mitra
ರಾಜ್ಯಶಿವಮೊಗ್ಗ

ಆನೆ ಬಿಡಾರಕ್ಕೆ ತಾರಾ ಮೆರುಗು

ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಗುರುವಾರ ತಾರಾ ಮೆರುಗು ಬಂದಿತ್ತು. ವಿಶ್ವ ಆನೆಗಳ ದಿನದ ಅಂಗವಾಗಿ ಅಲ್ಲಿನ ಆನೆಗಳಿಗೆ ಅಲಂಕಾರ ಮಾಡಲಾಗಿತ್ತು. ಕೋವಿಡ್ ಕಾರಣದಿಂದ ಸರಳ ಆಚರಣೆ ಮಾಡಲಾಗಿತ್ತು. ಈ ಆನೆ ಬಿಡಾರಕ್ಕೆ ನಟಿ ಮತ್ತು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಗುರುವಾರ ಭೇಟಿ ನೀಡಿದರು.
ಆನೆ ಹಬ್ಬದ ಅಂಗವಾಗಿ ತಾರಾ ಅನುರಾಧ ಅವರು ಆನೆ ಬಿಡಾರಕ್ಕೆÁಗಮಿಸಿದ್ದರು. ಆನೆಗಳಿಗೆ ಪೂಜೆ ಸಲ್ಲಿಸಿ, ಹಣ್ಣುಗಳನ್ನು ನೀಡಿದರು. ಅಲ್ಲದೆ ಆನೆಗಳ ಜೊತೆಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡು, ಸಂಭ್ರಮಿಸಿದರು.
ಇನ್ನು, ಆನೆ ಬಿಡಾರದ ಕುರಿತು ಮಾಹಿತಿ ಪಡೆದುಕೊಂಡ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಮಾವುತ, ಕಾವಾಡಿಗಳಿಗೆ ಒದಗಿಸುತ್ತಿರುವ ಸೌಲಭ್ಯ, ಆನೆಗಳ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಿಸಿಎಫ್ ರವಿಶಂಕರ್, ಡಿಸಿಎಫ್ ಐ.ಎಂ.ನಾಗರಾಜ್, ಆರ್.ಎಫ್.ಒ ಮಂಜುನಾಥ್, ವೈದ್ಯಾಧಿಕಾರಿ ಡಾ.ವಿನಯ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

Ad Widget

Related posts

ಸಾಂಸ್ಕೃತಿಕ ವೈಭವದಲ್ಲಿ ಮೇಳೈಸಿದ ದೀವರ ಕಲಾ ಸೌರಭ

Malenadu Mirror Desk

ಮಾರ್ಗಸೂಚಿ ಅನ್ವಯ ರಂಜಾನ್ ಆಚರಣೆ: ಚಿದಾನಂದ ವಟಾರೆ

Malenadu Mirror Desk

ಬಿಎಸ್‌ವೈ -ಈಶ್ವರಪ್ಪ ಬಣಜಗಳಕ್ಕೆ ಅಭ್ಯರ್ಥಿ ಘೋಷಣೆ ವಿಳಂಬ
ಮೂರನೇ ಪಟ್ಟಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಖೈರಾಗದ ಟಿಕೆಟ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.