Malenadu Mitra
ರಾಜ್ಯಶಿವಮೊಗ್ಗ

ಹಸೆಮಣೆ ಏರಬೇಕಿದ್ದವನ ಕರದೊಯ್ದ ಕ್ರೂರ ವಿದಿ

ಕೇವಲ ಒಂದು ವಾರ ಕಳೆದಿದ್ದರೆ ಆ ಜೋಡಿ ಹಸೆಮಣೆ ಏರಬೇಕಿತ್ತು. ಆದರೆ ಜವರಾಯನಿಗೆ ಅದು ಇಷ್ಟವಿದ್ದಂತೆ ಕಾಣಲಿಲ್ಲ. ಭೀಕರ ಅಪಘಾತದಲ್ಲಿ ಮದುಮಗನನ್ನೇ ಕ್ರೂರ ವಿದಿಕರೆದೊಯ್ದ.
ಇದು ಗುರುವಾರ ಸಂಜೆ ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಸಮಿಪ ಸಂಭವಿಸಿದ ಭೀಕರ ರಸ್ತೆ ಅಪಘಾತದ ಕರಾಳ ಮುಖ. ಎರಡು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಮುಂದಿನ ವಾರ ಮದುವೆಯೂ ನಿಕ್ಕಿಯಾಗಿತ್ತು. ಮದುಮಗ ರಾಕೇಶ್ ಮತ್ತು ಜ್ಯೋತಿ ಹಾಗೂ ಚೈತ್ರಾ ಶಿವಮೊಗ್ಗಕ್ಕೆ ಬರುತ್ತಿದ್ದರು. ಕುಂಚೇನಹಳ್ಳಿ ಸಮೀಪ ಬಸ್ ಓವರ್ ಟೇಕ್ ಮಾಡುವಾಗ ರಾಕೇಶ್ ಚಲಾಯಿಸುತ್ತಿದ್ದ ಶಿಫ್ಟ್ ಕಾರು ಬಸ್ಸಿಗೆ ಢಿಕ್ಕಿಯಾಯಿತು. ಬಸ್ ರಸ್ತೆ ಪಕ್ಕದ ಹೊಲಕ್ಕಿಳಿದಿತ್ತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ರಾಕೇಶ್ ಸ್ಥಳದಲ್ಲೇ ಸಾವು ಕಂಡ. ಮದುಮಗಳು ಜ್ಯೋತಿ ತೀವ್ರಗಾಯಗೊಂಡಿದ್ದಾಳೆ. ಕಾರಿನಲ್ಲಿದ್ದ ಚೈತ್ರಾ ಎಂಬಾಕೆಗೂ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ದೂರು ದಾಖಲಿಸಿಕೊಂಡಿದ್ದಾರೆ.

Ad Widget

Related posts

ಮೇಲ್ಮನೆ ಚುನಾವಣೆಗೆ ಈಡಿಗರ ಕಡೆಗಣನೆ, ಬಾಳೆಗುಂಡಿ ಪಕ್ಷೇತರವಾಗಿ ಕಣಕ್ಕಿಳಿಯುವರೆ ?

Malenadu Mirror Desk

ಮುಸ್ಲಿಂ ಬಂಧುಗಳನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುತ್ತೇವೆ :ಯಡಿಯೂರಪ್ಪ

Malenadu Mirror Desk

ಅಮ್ಮ.. ನಮ್ಮನ್ನು ಕೊಂದು ಬಿಟ್ಟೆಯಾ ?..

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.