Malenadu Mitra
ರಾಜ್ಯಶಿವಮೊಗ್ಗ

ಯುವಕನ ಕೊಲೆ, ಕಾರಣ ನಿಗೂಢ!

ಶಿವಮೊಗ್ಗ ನಗರದ ಬಾಪೂಜಿನಗರ ಬಡಾವಣೆಯ ಗಂಗಾಮತಸ್ಥ ಹಾಸ್ಟೆಲ್ ಎದುರು ಗುರುವಾರ ರಾತ್ರಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.

ಗೋಪಾಳದ ಸ್ವಾಮಿವಿವೇಕಾನಂದ ಬಡಾವಣೆಯ ಸಂತೋಷ್(30) ಕೊಲೆಯಾದ ಯುವಕ. ಪರಿಚಿತರ ಮನೆಗೆ ಬೈಕ್ ನಲ್ಲಿ ಹೋಗುತಿದ್ದಾಗ ಏಳು ಮಂದಿ ದುಷ್ಕರ್ಮಿಗಳು ಏಕಾಏಕಿ ದಾಳಿಮಾಡಿದ್ದಾರೆನ್ನಲಾಗಿದೆ. ಮೃತ ಯುವಕ ಕಾರ್ ಷೋರೂಂನಲ್ಲಿ ಕೆಲಸ ಮಾಡುತ್ತಿದ್ದನು.ಬಾಪೂಜಿನಗರಕ್ಕೆ ಆಗಾಗ ಬರುತಿದ್ದ ಆತನ ಮೇಲೆ ಪೂರ್ವನಿಯೋಜಿತ ಯೋಜನೆಯಂತೆ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ.

ಮೃತನ ತಂದೆ ನೀಡಿದ ದೂರಿನಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲಿಸ್ ತಂಡ ರಚಿಸಲಾಗಿದೆ

Ad Widget

Related posts

ಪ್ರಚೋದನಕಾರಿ ಭಾಷಣ :ದೂರು

Malenadu Mirror Desk

ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ವಿಧಾನ ಸೌಧ ಚಲೊ

Malenadu Mirror Desk

ಜ್ಯೋತಿ, ಲೋಕೇಶ್‍ಗೆ ಪಿಎಚ್.ಡಿ. ಪದವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.