Malenadu Mitra
ರಾಜ್ಯಶಿವಮೊಗ್ಗ

ಶಿವಮೊಗ್ಗ ನೂತನ ಡಿಸಿ ಸೆಲ್ವಮಣಿ

ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಕೋಲಾರ ಡಿಸಿಯಾಗಿದ್ದ ಡಾ.ಸೆಲ್ವಮಣಿ ಆರ್. ಅವರನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಳೆದ ಮೂರು ವರ್ಷಗಳಿಂದ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಶಿವಕುಮಾರ್ ಅವರ ವರ್ಗಾವಣೆ ಆಗಲಿದೆ ಎಂಬ ವದಂತಿ ಇತ್ತಾದರೂ ಹೀಗೆ ದಿಢೀರ್ ವರ್ಗಾವಣೆಯಾಗಲಿದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಯಾರೊಂದಿಗೂ ಸಲಿಗೆಯಿಂದಲೂ ನಡೆದುಕೊಳ್ಳದ ಮತ್ತು ಖಾರವಾಗಿಯೂ ವರ್ತಿಸದೆ ಕೆಲಸ ನಿರ್ವಹಿಸುತ್ತಿದ್ದ ಶಿವಕುಮಾರ್ ಅವರಿಗೆ ಂiiವುದೇ ಸ್ಥಳ ತೋರಿಸಿಲ್ಲ.
ನೂತನ ಡಿಸಿ ಸೆಲ್ವಮಣಿ ಅವರು ಬುಧವಾರ ಬೆಳಗ್ಗೆಯೇ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಮತ್ತಿತರರು ಹಾಜರಿದ್ದರು.

Ad Widget

Related posts

ವಿನಯ್ ಗುರೂಜಿ ಸಾರಥ್ಯದಲ್ಲಿ ಸಂಧಾನ, ಬಿಜೆಪಿ ಸೇರಿದ ಧನಂಜಯ ಸರ್ಜಿ

Malenadu Mirror Desk

ಧರ್ಮೇಗೌಡರ ಆತ್ಮಹತ್ಯೆ ಅಸಲಿ ಕಾರಣ ಏನು ಗೊತ್ತಾ ?

Malenadu Mirror Desk

ಮನೆ ಮನೆಯಲ್ಲಿ ರಾಷ್ಟ್ರಾಭಿಮಾನ ಮೊಳಗಬೇಕು :ಸಚಿವ ಕೆ.ಎಸ್. ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.