Malenadu Mitra
ರಾಜ್ಯಶಿವಮೊಗ್ಗ

ಪುರದಾಳಲ್ಲಿ ವಿಜೃಂಬಣೆ ರಥೋತ್ಸವ , ಪ್ರೇಕ್ಷಕರ ಗಮನ ಸೆಳೆದ ಯಕ್ಷಗಾನ

ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ಸ್ವಾಮಿ ರಥೋತ್ಸವ. ಮಂಗಳವಾರ ವಿಜೃಂಬಣೆಯಿಂದ ನೆರವೇರಿತು.

ರಥೋತ್ಸವ ಅಂಗವಾಗಿ ಸ್ವಾಮಿಯ ರಾಜಬೀದಿ ಉತ್ಸವ ನೆರವೇರಿತು. ಈ ಸಂದರ್ಭ ವಿವಿಧ ಜಾನಪದ ಕಲಾ ತಂಡಗಳಾದ ಡೊಳ್ಳು, ವೀರಗಾಸೆ,ಗೌಳಿಗರ ಸಾಂಪ್ರದಾಯಿಕ ನೃತ್ಯ ತಂಡಗಳ ಕಲಾ ಪ್ರದರ್ಶನ ನಡೆಯಿತು.

ಪುರದಾಳು ಗೌಳಿಗರ ಆಕರ್ಷಕ ಸಾಂಪ್ರದಾಯಿಕ ನೃತ್ಯ

ರಾತ್ರಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಕಿಲಾರದ ಮಹಾ ಗಣಪತಿ ಯಕ್ಷಗಾನ ಮಂಡಳಿಯಿಂದ. ಶಿವಭಕ್ತ ವೀರಮಣಿ ಯಕ್ಷಗಾನ ಪ್ರದರ್ಶನ ಕಲಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು

ಬುಧವಾರ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಗೂ ಅನ್ನ ಸಂತರ್ಪಣೆ ನೆರವೇರಿತು. ಅಕ್ಕದ ಊರು, ಶಿವಮೊಗ್ಗ ಸೇರಿದಂತೆ ಹಲವೆಡೆಯಿಂದ ಸಾವಿರಾರು ಭಕ್ತ ಸಮುದಾಯ ನೆರೆದಿತ್ತು.

Ad Widget

Related posts

ಕೊರೊನ ಮತ್ತಷ್ಟು ಗಂಭೀರ: 17 ಸಾವು, ಎಲ್ಲಿ ಎಷ್ಟು ಸೋಂಕಿತರು ?

Malenadu Mirror Desk

ಮುಳುಗಡೆ ಸಂತ್ರಸ್ತರ ಸಮಸ್ಯೆ ಕುರಿತು ಉನ್ನತ ಮಟ್ಟದ ಸಭೆ

Malenadu Mirror Desk

ಅಮ್ಮ.. ನಮ್ಮನ್ನು ಕೊಂದು ಬಿಟ್ಟೆಯಾ ?..

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.