Malenadu Mitra
ರಾಜ್ಯಶಿವಮೊಗ್ಗ

ಪುರದಾಳು ಪಂಚಾಯಿತಿಯಲ್ಲಿ ಗುರುವಂದನೆ ಕಾರ್ಯಕ್ರಮ

ಶಿವಮೊಗ್ಗ ತಾಲೂಕು ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಶಾಲೆಗಳ ಶಿಕ್ಷಕರಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಂದನೆ, ಪ್ರತಿಭಾ ಪುರಸ್ಕಾರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮ ನೆರವೇರಿಸಲಾಯಿತು. ಇದೇ ಸಂದರ್ಭ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಅವಶ್ಯವಿರುವ ತರಗತಿ ಪುಸ್ತಕಗಳನ್ನು ಮತ್ತು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭ ಆಯಾ ಶಾಲೆಗಳ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾರತೀ ನಾಗರಾಜ್, ಉಪಾಧ್ಯಕ್ಷ ಗಿರೀಶ್ ಎಸ್.ಆರ್. ಸದಸ್ಯರುಗಳಾದ ಪ್ರದೀಪ್ ಹೆಬ್ಬೂರ್, ಮಾನಸ ಸತೀಶ್, ಕುಸುಮಾ ಜಗದೀಶ್,ನಾಗವೇಣಿ ಗುಡ್ಡದ ಅರಕೆರೆ, ಲಕ್ಷ್ಮೀಬಾಯಿ, ಶೆಟ್ಟಿಹಳ್ಳಿಯ ಕಮಲಾಕ್ಷಿ, ಮಾಜಿ ಸದಸ್ಯ ರಾಮಾನಾಯ್ಕ ಮುಖ್ಯ ಶಿಕ್ಷಕರುಗಳು, ಪಿಡಿಒ ಮತ್ತು ಸಿಬ್ಬಂದಿ ಹಾಜರಿದ್ದರು.

Ad Widget

Related posts

ಅಧಿವೇಶನಕ್ಕೆ ಗೈರಾಗಿರುವ ಈಶ್ವರಪ್ಪರಿಂದ ಶಿವಮೊಗ್ಗ ಜನತೆಗೆ ದ್ರೋಹ

Malenadu Mirror Desk

ಪಂಚಮಸಾಲಿ 2Aಗೆ ಬೇಡ: ನಾರಾಯಣಗುರು ವೇದಿಕೆ

Malenadu Mirror Desk

ಬಿಜೆಪಿ ಭಾವನಾತ್ಮಕ ಆಟ ನಿಲ್ಲಿಸಬೇಕು: ಮಧುಬಂಗಾರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.