Malenadu Mitra
ರಾಜ್ಯ

ಈ ಬಾಲಕನ ಸಾವು ನ್ಯಾಯವೇ ದೇವಾ ?

ಸಮವಸ್ತ್ರ ಧರಿಸಿ ಶಾಲೆಯಲಿ ನಲಿಕಲಿಯಬೇಕಾದ ಹುಡುಗನಿಗೆ ಕಾಲನ ಕರೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಶಾಲೆಗೆ ತಯಾರಾಗುತಿದ್ದ ಹತ್ಬಾತನೇ ತರಗತಿ ಬಾಲಕ ಹಠಾತ್ ಹೃದಯಾಘಾತಕ್ಕೆ ಬಲಿಯಾದ ಘಟನೆ ಸೊರಬ ತಾಲೂಕು ಎಣ್ಣೆಕೊಪ್ಪದಲ್ಲಿ ನಡೆದಿದೆ.
ಬುಧವಾರ ಮುಂಜಾನೆ ಶಾಲೆಗೆ ಹೋಗಲು ಸಿದ್ಧತೆ ತಯಾರಾಗುತ್ತಿದ್ದ ವೇಳೆ ಬಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆತನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ವಿದ್ಯಾರ್ಥಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಓದುವುದರಲ್ಲಿ ಮುಂದಿದ್ದ ಬಾಲಕ, ದೈಹಿಕ ಚಟುವಟಿಕೆಗಳಲ್ಲೂ ಸಹ ನಿಪುಣನಾಗಿದ್ದ. ಆರೋಗ್ಯವಾಗಿದ್ದ ಈಗ ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿ ಮೃತನಾಗಿರುವುದು ದುರಂತವಾಗಿದೆ.

Ad Widget

Related posts

ಮಲೆನಾಡಿನಲ್ಲಿ ಕೊರೊನ ಹೆಚ್ಚಳ, ಎಲ್ಲೆಲ್ಲಿ ಎಷ್ಟು ಪಾಸಿಟಿವ್ ?

Malenadu Mirror Desk

ಪಠ್ಯಪುಸ್ತಕ ತಿದ್ದುಪಡಿ ಮಾಡಿಯೇ ಸಿದ್ಧ : ಶಿಕ್ಷಣ ಸಚಿವ ಮಧು ಬಂಗಾರಪ್ಪ

Malenadu Mirror Desk

ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ: ಐವರ ಬಂಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.