Malenadu Mitra
ರಾಜ್ಯಶಿವಮೊಗ್ಗ

ಪುರದಾಳು ಬಸವೇಶ್ವರ ಜಾತ್ರೆ, ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ
ಗೋಪಾಲ್ ಆಚಾರ್, ಸುಬ್ರಹ್ಮಣ್ಯ ಚಿಟ್ಟಾಣಿ, ಅಶೋಕ್ ಭಟ್ ಸಿದ್ದಾಪುರ, ಕೃಷ್ಣಮೂರ್ತಿ ಹೆಬ್ಬಿಗೆ, ನಾಗರಾಜ್ ಪಂಚಲಿಂಗ, ಸಂಜಯ್ ಬೆಳೆಯೂರು, ಶ್ರೀಧರ್ ಭಟ್ ಕಾಸರಗೋಡು ವೇಷ

ಶಿವಮೊಗ್ಗ,ಫೆ.೧೭: ಮಹಾಶಿವರಾತ್ರಿ ಪ್ರಯುಕ್ತ ಪುರದಾಳು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ಸ್ವಾಮಿ ಜಾತ್ರಾಮಹೋತ್ಸವ ಫೆ.೧೮ ಮತ್ತು ೧೯ ರಂದು ವಿಜೃಂಭಣೆಯಿಂದ ನಡೆಯಲಿದೆ. ಫೆ.೧೮ ರಂದು ಬೆಳಗ್ಗೆಯಿಂದ ಗಂಗಾಪೂಜೆ, ನವಗ್ರಹಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ೪ ಗಂಟೆ ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ರಾಜಬೀದಿ ರಥೋತ್ಸವ ನಡೆಯಲಿದೆ. ಭಜನೆ, ಗೌಳಿಗರ ಡೊಳ್ಳುಕುಣಿತ, ವೀರಗಾಸೆ, ಡೊಳ್ಳುಕುಣಿತ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ರಥೋತ್ಸವದಲ್ಲಿ ಪಾಲ್ಗೊಳ್ಳಲಿವೆ.
ಅದೇ ದಿನ ರಾತ್ರಿ ೯.೩೦ ರಿಂದ ಅಹೋರಾತ್ರಿ ಚಂದ್ರಹಾಸ- ಕಂಸವಧೆ ಎಂಬ ಯಕ್ಷಗಾನ ಪ್ರಸಂಗಗಳ ಪ್ರದರ್ಶನವಿದೆ. ಮಹಾಗಣಪತಿ ಯಕ್ಷ ಕಲಾಬಳಗದ ಸಂಯೋಜನೆಯಲ್ಲಿ ಪ್ರದರ್ಶನಗೊಳ್ಳುವ ಯಕ್ಷಗಾನದಲ್ಲಿ ನಾಡಿನ ಖ್ಯಾತ ಕಲಾವಿದರಾದ ಗೋಪಾಲ್ ಆಚಾರ್, ಸುಬ್ರಹ್ಮಣ್ಯ ಚಿಟ್ಟಾಣಿ, ಅಶೋಕ್ ಭಟ್ ಸಿದ್ದಾಪುರ, ಕೃಷ್ಣಮೂರ್ತಿ ಹೆಬ್ಬಿಗೆ, ನಾಗರಾಜ್ ಪಂಚಲಿಂಗ, ಸಂಜಯ್ ಬೆಳೆಯೂರು, ಶ್ರೀಧರ್ ಭಟ್ ಕಾಸರಗೋಡು, ಶ್ರೀಧರ್ ಹೆಗಡೆ ಚಪ್ಪರಮನೆ ಸೇರಿದಂತೆ ಅನೇಕ ಕಲಾವಿದರು ಪಾತ್ರ ನಿರ್ವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಶಂಕರ್ ಭಟ್, ಬ್ರಹ್ಮೂರು, ಪರಮೇಶ್ವರ್ ನಾಯ್ಕ್ ಸಿದ್ದಾಪುರ, ಅಕ್ಷಯ್ ಪ್ರಭು ಮಾಸ್ತಿಕಟ್ಟೆ, ಮಂಜುನಾಥ್, ಲಕ್ಷ್ಮೀನಾರಾಯಣ್ ಸಂಪ, ಗಣೇಶ್ ಭಟ್ ಕೆರೆಕೈ ಮೊದಲಾವರು ಭಾಗವಹಿಸಲಿದ್ದಾರೆ.
ಸಾಮೂಹಿಕ ಸತ್ತನಾರಾಯಣ ಪೂಜೆ
ಫೆ.೧೯ ರಂದು ಬೆಳಗ್ಗೆ ೧೦.೩೦ ಕ್ಕೆ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀ ಉದ್ಭವ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.

Ad Widget

Related posts

ಜೂ.20,21 : ’ಎನ್.ಇ.ಎಸ್ ಅಮೃತಮಹೋತ್ಸವ ಸಂಭ್ರಮ, ರಾಷ್ಟ್ರೀಯ ಶಿಕ್ಷಣ ಸಮಿತಿ ಅಮೃತ ನಡಿಗೆ | ಅಮೃತ ಪ್ರತಿಭಾ ಪುರಸ್ಕಾರ | ಸ್ಥಾಪಕರ ಸ್ಮರಣೆ

Malenadu Mirror Desk

ಬಡವರಿಗೆ ಸಾಲ ನೀಡುವಲ್ಲಿ ಅಸಡ್ಡೆ ಬೇಡ : ಬಿ.ವೈ.ರಾಘವೇಂದ್ರ

Malenadu Mirror Desk

ಎಸ್.ಬಂಗಾರಪ್ಪ ಯೋಜನೆಗಳು ಎಂದಿಗೂ ಜೀವಂತ: ಮಧು ಬಂಗಾರಪ್ಪ , ಮಾಜಿ ಮುಖ್ಯಮಂತ್ರಿಯ 90 ನೇ ವರ್ಷದ ಜನ್ಮದಿನ ಆಚರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.