Malenadu Mitra
ರಾಜ್ಯಶಿವಮೊಗ್ಗ

ಬೆಂಗಳೂರಲ್ಲಿ ಮಧು ಬಂಗಾರಪ್ಪಗೆ ಅಭಿಮಾನಿಗಳಿಂದ ಸನ್ಮಾನ

ಸೊರಬ: ಬೆಂಗಳೂರಿನಲ್ಲಿ ನೆಲೆಸಿದ ತಾಲೂಕಿನ ಮಧು ಬಂಗಾರಪ್ಪ ಅಭಿಮಾನಿಗಳು ನೂತನ ಸಚಿವರಾದ ಮಧು ಬಂಗಾರಪ್ಪ ಅವರನ್ನು ಸದಾಶಿವ ನಗರದ ನಿವಾಸದಲ್ಲಿ ಭಾನುವಾರ ಸನ್ಮಾನಿಸಿ ಅಭಿನಂದಿಸಿದರು. ವಕೀಲ ಕುಮಾರಸ್ವಾಮಿ ಹೊಸೂರು ಮಾತನಾಡಿ, ಮಧು ಬಂಗಾರಪ್ಪ ಅವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಜತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿರುವುದು ಸಂತಸ ನೀಡಿದೆ. ಮಧು ಬಂಗಾರಪ್ಪ ಅವರ ಗೆಲುವಿನಿಂದ ಸೊರಬ ತಾಲೂಕಿನ ಅಭಿವೃದ್ಧಿ ಸೇರಿದಂತೆ ಜಿಲ್ಲೆ ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿ ಕಾಣಲಿದೆ ಎಂದರು.

ಎಸ್.ಬಂಗಾರಪ್ಪ ಅವರು ಹಲವು ಯೋಜನೆಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ನೆಲೆಸಿದ ನಾಯಕರಾಗಿದ್ದಾರೆ. ಆ ನಿಟ್ಟಿನ ಹೆಸರು ಗಳಿಸಲು ಮಧು ಬಂಗಾರಪ್ಪ ಅವರಲ್ಲಿಯೂ ಸಾಮರ್ಥ್ಯವಿದ್ದು ರಾಜ್ಯ, ರಾಷ್ಟ್ರ ಮಟ್ಟದ ನಾಯಕರಾಗಿ ಹೊರಹೊಮ್ಮಲಿದ್ದಾರೆ ಎಂದರು.

ನೂತನ ಸಚಿವ ಮಧು ಬಂಗಾರಪ್ಪ ಅವರು ಸನ್ಮಾನ ಸ್ವೀಕರಿಸಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಅಶೋಕ್ ನಾಯ್ಕ ನೆಗವಾಡಿ, ದತ್ತತ್ರೇಯ ಬಿದರಗೇರಿ, ಯಶವಂತ ಕುಂದಗಸವಿ, ದೇವರಾಜ ನಿಟ್ಟಕ್ಕಿ, ಅರುಣಕುಮಾರ ಕುಳುಗ, ಕಲ್ಯಾಣಕುಮಾರ ತವನಂದಿ, ಉಮೇಶ್ ಹುಲ್ತಿಕೊಪ್ಪ, ಆಕಾಶ್ ಸಾರೆಕೊಪ್ಪ, ಉಮೇಶ್ ಯಲವಳ್ಳಿ, ಪ್ರೇಮ್ ಕುಮಾರ ಕುಮ್ಮೂರು, ಪ್ರಕಾಶ್ ಸಾರೆಮರೂರು, ನಾಗರಾಜ ಗೆಂಡ್ಲ, ಯುವರಾಜ ಓಟೂರು, ಗಣೇಶ್ ಓಟೂರು,
ವಿನಾಯಕ ಗುಡ್ಡೆಮನೆ, ಮಂಜುನಾಥ ಆನವಟ್ಟಿ ಮತ್ತಿತರರಿದ್ದರು.

Ad Widget

Related posts

ಸಂಪದ್ಭರಿತ ದೇಶ ಕಟ್ಟಲು ಪಣ ತೊಡೋಣ: ಶಂಕರಮೂರ್ತಿ

Malenadu Mirror Desk

ರಾಜ್ಯಪಾಲರ ಮಲ್ನಾಡ್ ಟೂರ್ ಹೇಗಿತ್ತು ಗೊತ್ತಾ ? ಮಳೆನಾಡಿನ ಸಿರಿ ಸವಿದ ಥಾವರ್‌ಚಂದ್ ಗೆಹ್ಲೋಟ್

Malenadu Mirror Desk

ಕಣ್ಣು,, ಕಿವಿ, ಬಾಯಿ ಇಲ್ಲದ ಸರ್ಕಾರ: ಸಂಸದ ರಾಘವೇಂದ್ರ,ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.