Malenadu Mitra
ರಾಜ್ಯಶಿವಮೊಗ್ಗ

ಭೀಮನ ಅಮವಾಸ್ಯೆ ಸಿಗಂದೂರು ದೇವಿಗೆ ವಿಶೇಷ ಅಲಂಕಾರ, ಹರಿದು ಬಂದ ಭಕ್ತಸಾಗರ

ಶಿವಮೊಗ್ಗ,ಜು.೧೭: ಮಲೆನಾಡಿನ ಪ್ರಸಿದ್ದ ಧಾರ್ಮಿಕ ಕೇಂದ್ರವಾದ ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇವಿಗೆ ಭೀಮನ ಅಮವಾಸ್ಯೆ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಸೋಮವಾರ ಭೀಮನ ಅಮವಾಸ್ಯೆ ಯಾಗಿದ್ದರಿಂದ ಭಕ್ತಸಾಗರವೇ ಹರಿದುಬಂದಿತ್ತು.
ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ದೇವಸ್ಥಾನವನ್ನು ಹೊರಾಂಗಣ ಮತ್ತು ಒಳಾಂಗಣದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ತರಾವತಿ ಹೂವು, ತುಳಸಿ, ಮೆಕ್ಕೆಜೋಳದ ಅಲಂಕಾರ ಭಕ್ತಪ್ರಿಯವಾಗಿತ್ತು. ದೇಗುಲಕ್ಕೆ ಬಂದ ಎಲ್ಲಾ ಭಕ್ತರಿಗೂ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶರಾವತಿ ಕಣಿವೆ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ಹಿನ್ನೀರು ಏರುತ್ತಿರುವ ಕಾರಣ ಲಾಂಚ ಸೇವೆ ಸುಗಮವಾಗಿದ್ದು, ನಿಸರ್ಗದ ಮಡಿಲಲ್ಲಿರುವ ದೇವಾಲಯಕ್ಕೆ ಬರುವ ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿತ್ತು.

Ad Widget

Related posts

ಅತೀ ಹಿಂದುಳಿದವರಿಗೆ ಅನ್ಯಾಯ, ದುಬಾರಿ ವಾಚ್ ಕಟ್ಟಿಕೊಂಡು ಸಮಾಜವಾದಿ ಎನ್ನಲಾಗದು. ಅರಸು ಚಿಂತನೆ ಇರಬೇಕು, ಹಿಂದುಳಿದ ವರ್ಗದ ಸಮಾನ ಮನಸ್ಕರ ಸಭೆಯಲ್ಲಿ ಹರಿಪ್ರಸಾದ್ ವಾಗ್ದಾಳಿ

Malenadu Mirror Desk

ಉತ್ತಮ ಪರಿಸರ ನೀಡುವ ಮೂಲಕ ಧನ್ಯರಾಗಬೇಕು : ಅನುರಾಧ

Malenadu Mirror Desk

ರೌಡಿಶೀಟರ್ ಕಾಲಿಗೆ ಗುಂಡು ಹೊಡೆದು ಬಂಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.