Malenadu Mitra
ರಾಜ್ಯ

ಹುಡುಗ-ಹುಡುಗಿ ಬಸ್ಸಿಂದ ಹಾರಿದ್ಯಾಕೆ ?


ತಾವು ಕುಳಿತಿದ್ದ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದಕ್ಕೆ ಭಯಬಿದ್ದ ಇಬ್ಬರು ಹುಡುಗಿಯರು ಹಾಗೂ ಒಬ್ಬ ಹುಡುಗ ಬಸ್ ಚಲಿಸುತ್ತಿದ್ದಾಗಲೇ ಹೊರಕ್ಕೆ ಜಿಗಿದು ಗಾಯಗೊಂಡಿದ್ದಾರೆ.
ಸಾಗರದಿಂದ ಕಾರ್ಗಲ್‌ಗೆ ಬಸ್ ಹೋಗುತ್ತಿದ್ದಾಗ ಬಸ್‌ನಲ್ಲಿ ಕುಳಿತಿದ್ದ ಕಾರ್ಗಲ್‌ನ ಶಿಲ್ಪಾ, ಹುಣಸೂರಿನ ಮಧುರಾ ಹಾಗೂ ಯುವಕನೊಬ್ಬ ಜಿಗಿದಿದ್ದಾರೆ. ತೀವ್ರ ಗಾಯಗೊಂಡ ಮೂವರನ್ನೂ ಸ್ಥಳೀರಾದ ಜಾವೇದ್ ತಮ್ಮ ಟಾಟಾ ಏಸ್ ವಾಹನದಲ್ಲಿ ಕರೆತಂದು ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಯಿತು. ಚಲಿಸುತ್ತಿದ್ದ ಬಸ್‌ನಿಂದ ಈ ಮೂವರೂ ಕೆಳಗೆ ಹಾರಲು ಬಸ್‌ಗೆ ಬೆಂಕಿಬಿದ್ದಿರುವುದು ಕಾರಣವಲ್ಲ. ಬಸ್‌ನಲ್ಲಿದ್ದ ಅಗ್ನಿನಿರೋಧಕ ಸಿಲಿಂಡರ್ ಲೀಕ್ ಆಗಿ ಅದರಿಂದ ಗ್ಯಾಸ್ ಬಂದಿದ್ದೇ ಈ ಪ್ರಯಾಣಿಕರು ಆತಂಕಗೊಳ್ಳಲು ಕಾರಣ ಎನ್ನಲಾಗಿದೆ. ಸಿಲಿಂಡರ್ ನಿಂದ ಬಂದ ಹೊಗೆ ಬೆಂಕಿಹೊತ್ತಿರುವುದಕ್ಕೆ ಬರುತ್ತಿದೆ ಎಂದು ಭಾವಿಸಿ ಅವಸರಕ್ಕೆ ಬಿದ್ದ ಮೂವರು ಜಿಗಿದು ಈಗ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget

Related posts

ದೇಶಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಇನ್ವಿಸ್ಟಿಗೇಷನ್ ಯಾವುದು ಗೊತ್ತಾ?
ಇಂಡಿಯಾ ಸೈಬರ್ ಕಾಪ್ ಅವಾರ್ಡ್ ಅಂತಿಮ ಸುತ್ತಿಗೆ ಇನ್ಸ್ ಪೆಕ್ಟರ್ ಗುರುರಾಜ್

Malenadu Mirror Desk

ಅಡಿಕೆ ಎಲೆಚುಕ್ಕೆ ರೋಗ ; ಆತಂಕಕ್ಕೊಳಗಾಗದಿರಲು ಮನವಿ : ಆರಗ ಜ್ಞಾನೇಂದ್ರ

Malenadu Mirror Desk

ನನಸಾದ ಈಡಿಗರ ಕನಸು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.